Advertisement

ಆಪರೇಷನ್‌ ಪ್ರಯತ್ನದ ಸತ್ಯ ಬಿಚ್ಚಿಟ್ಟಿರುವ ಆನಂದ್‌ಸಿಂಗ್‌ 

06:25 AM Jan 16, 2019 | Team Udayavani |

ಬೆಂಗಳೂರು: ಬಿಜೆಪಿಯವರು ಆಪರೇಷನ್‌ ಕಮಲ ನಡೆಸುತ್ತಿರುವ ಬಗ್ಗೆ ಮಹತ್ವದ ಮಾಹಿತಿಗಳನ್ನು ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಪಕ್ಷದ ನಾಯಕರ ಎದುರು ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಇಬ್ಬರು ಪಕ್ಷೇತರ ಶಾಸಕರನ್ನು ಹೊರತು ಪಡೆಸಿ ಕಾಂಗ್ರೆಸ್‌ನ ಒಂಬತ್ತು ಶಾಸಕರನ್ನು ಕರೆತರುವುದಾಗಿ ರಮೇಶ್‌ ಜಾರಕಿಹೊಳಿ ಬಿಜೆಪಿ ಶಾಸಕರಿಗೆ ಭರವಸೆ ನೀಡಿದ್ದಾರೆ. ವಿಶೇಷವಾಗಿ ಬಳ್ಳಾರಿಯಿಂದ ನಾಲ್ವರು ಶಾಸಕರನ್ನು ಕರೆತರುವುದಾಗಿ ಹೇಳಿದ್ದಾರೆ. ಕಂಪ್ಲಿ ಗಣೇಶ್‌ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಕೊನೆ ಗಳಿಗೆಯಲ್ಲಿ ಹಿಂದೆ ಸರಿದಿದ್ದಾರೆ ಎಂದು ಆನಂದ್‌ ಸಿಂಗ್‌ ರಾಜ್ಯ ನಾಯಕರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತಾಪ್‌ಗೌಡ ಪಾಟೀಲ್‌, ಬಸವರಾಜ್‌ ದದ್ದಲ್‌, ಶಿವರಾಮ್‌ ಹೆಬ್ಟಾರ್‌ ಮೇಲೆಯೂ ಒತ್ತಡ ಹೇರಲಾಗುತ್ತಿದ್ದು, ಆಪರೇಷನ್‌ ಕಮಲದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ ಎಂದು ಆನಂದ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. ನನ್ನದೂ ಇಡಿ ಹಾಗೂ ಐಟಿ ಇಲಾಖೆಯ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ  ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದ್ದಾರೆ . 

ಜೆಡಿಎಸ್‌ನ ಶಿರಾ ಶಾಸಕ ಸತ್ಯನಾರಾಯಣ ಹಾಗೂ ನಾಗಠಾಣಾ ಶಾಸಕ ದೇವಾನಂದ ಚೌಹಾನ್‌ ಅವರಿಗೂ ಬಿಜೆಪಿ ನಾಯಕರು ಕರೆ ಮಾಡಿ ಒತ್ತಡ ಹೇರುತ್ತಿದ್ದಾರೆ ಎಂದು ಆನಂದ್‌ ಸಿಂಗ್‌ ಪಕ್ಷದ ನಾಯಕರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next