Advertisement

ನಾನು ಡಿ.ಕೆ.ಶಿವಕುಮಾರ್ ಮನೆಗೆ ಹೋಗಬಾರದಿತ್ತು: ಆನಂದ್ ಸಿಂಗ್ ಗೆ ಅರಿವು !

08:55 PM Feb 04, 2022 | Team Udayavani |

ಬೆಂಗಳೂರು : ನಾನು ಡಿ.ಕೆ.ಶಿವಕುಮಾರ್ ಮನೆಗೆ ಹೋಗಬಾರದಿತ್ತು, ಈಗ ಅರಿವಿಗೆ ಬಂದಿದೆ ಎಂದು ಸಚಿವ ಸಚಿವ ಆನಂದ್ ಸಿಂಗ್ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ನಾನು ಸ್ನೇಹದ ದೃಷ್ಟಿಯಿಂದ ಹೋಗಿದ್ದು, ಆದರ ಅದರ ಬಗ್ಗೆ ಆಗುವ ಬೆಳವಣಿಗೆಗಳ ಬಗ್ಗೆ ಆಲೋಚನೆ ಮಾಡಿರಲಿಲ್ಲ.ನಾನು ಹೋಗಿದ್ದ ಸನ್ನಿವೇಶ ಸರಿ ಇರಲಿಲ್ಲ ಭೇಟಿ ಬಗ್ಗೆ ಸಿಎಂಗೆ, ಯಡಿಯೂರಪ್ಪ ಇಬ್ಬರಿಗೂ ವಿವರಣೆ ಕೊಟ್ಟು ಸ್ಪಷ್ಟನೆ ಕೊಟ್ಟಿದ್ದೇನೆ ಎಂದರು.

ಬಿಜೆಪಿ, ಯಡಿಯೂರಪ್ಪ ವಿಜಯನಗರ ಜಿಲ್ಲೆ ಕೊಟ್ಟವರು. ಬಿಜೆಪಿ ಪಕ್ಷವನ್ನು ಬಿಡುವ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಆ ರೀತಿ ಹೋಗಬೇಕು ಅಂದ್ರೆ ಬ್ಯಾಕ್ ಡೋರ್ ಎಂಟ್ರಿ ಬೇರೆ ಇವೆ, ಹಾಗಿದ್ದರೆ ನೇರವಾಗಿ ಏಕೆ ಭೇಟಿ ಮಾಡಬೇಕಿತ್ತು ನಾನು..!? ಎಂದು ಪ್ರಶ್ನಿಸಿದರು.

ಮಾಧ್ಯಮಗಳು ನನ್ನ ಸಂಶಯ ದೃಷ್ಟಿಯಿಂದ ನೋಡಿದವು ಅಂತಾ ಹೇಳುವುದಿಲ್ಲ, ನಾನೇ ಅದಕ್ಕೆ ಅವಕಾಶ ಮಾಡಿಕೊಡಬಾರದಿತ್ತು ಅನ್ನಿಸಿದೆ ನನಗೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next