Advertisement

Parliament Security Breach: ನೆರೆಹೊರೆಯವರಿಗೂ ಅಪರಿಚಿತ ಮನೋರಂಜನ್‌!

12:47 AM Dec 14, 2023 | Team Udayavani |

ಮೈಸೂರು: ಕಲಾಪದ ವೇಲೆ ಸಂಸತ್‌ ಸದನಕ್ಕೆ ನುಗ್ಗಿ ಕೋಲಾಹಲ ಎಬ್ಬಿಸಿದ ಮೈಸೂರಿನ ಯುವಕ ಮನೋರಂಜನ್‌ ಕುರಿತು ನೆರೆಹೊರೆಯವರಿಗೇ ಮಾಹಿತಿ ಇಲ್ಲ!

Advertisement

ವಿಜಯನಗರದಲ್ಲಿ ವಾಸವಿರುವ ಮನೋರಂಜನ್‌ ಮನೆಯಿಂದ ಹೋಗುವ ಮತ್ತು ಬರುವ ಮಾಹಿತಿ ಯಾರಿಗೂ ಇಲ್ಲ. ಕೆಲವು ವರ್ಷಗಳಿಂದ ಯಾವುದೇ ಚುನಾವಣೆಗೆ ಮತದಾನ ಮಾಡಲೂ ಈತ ಬಂದಿರಲಿಲ್ಲ. ತನಗೆ ಬರುವ ಎಲ್ಲ ಅಂಚೆ, ಕೊರಿಯರ್‌ಗಳನ್ನು ಬೆಂಗಳೂರಿನಲ್ಲಿ ತಾನು ಉಳಿದುಕೊಂಡಿರುವ ಮನೆಯ ವಿಳಾಸಕ್ಕೆ ಬದಲಿಸಿಕೊಂಡಿದ್ದ ಎನ್ನಲಾಗಿದೆ.

ಈತ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದ ದೇವರಾಜೇಗೌಡ-ಶೈಲಜಾ ದಂಪತಿ ಪುತ್ರ. 2014ರಲ್ಲಿ ಬೆಂಗಳೂರಿನ ಕಾಲೇಜೊಂದರಲ್ಲಿ ಬಿಇ ಪದವಿ ಪಡೆದಿದ್ದು, ಬಳಿಕ ಊರಲ್ಲಿರುವ ಕೃಷಿ ಭೂಮಿಯನ್ನು ನೋಡಿಕೊಂಡು ಬೆಂಗಳೂರು, ದಿಲ್ಲಿ ಎಂದೆಲ್ಲ ಸುತ್ತಾಡಿಕೊಂಡಿದ್ದ ಎಂದು ಹೆತ್ತವರು ತಿಳಿಸಿದ್ದಾರೆ. ಮೈಸೂರಿನ ಸೈಂಟ್‌ ಜೋಸೆಫ್ ಶಾಲೆಯಲ್ಲಿ ಹೈಸ್ಕೂಲ್‌, ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ  ಮುಗಿಸಿದ್ದ. 2016ರಲ್ಲಿ ಯುಎನ್‌ಎ ಮತ್ತು ಕಾಂಬೋಡಿಯಾಗೆ ಹೋಗಿ ಬಂದಿದ್ದ. ಮೈಸೂರಿಗೆ ಬಂದಾಗ  ಕೆಲವು ಮಕ್ಕಳಿಗೆ ಕರಾಟೆ ಹೇಳಿಕೊಡುತ್ತಿದ್ದ. ಓದುವ ಹವ್ಯಾಸ ಹೊಂದಿದ್ದ ಆತ ನೂರಾರು ಪುಸ್ತಕಗಳನ್ನು ಹೊಂದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next