Advertisement

ಸರಳ-ಸಜ್ಜನ ರಾಜಕಾರಣಿ ಅನಂತಕುಮಾರ್‌ ಇನ್ನು ನೆನಪು ಮಾತ್ರ

04:05 PM Nov 13, 2018 | Team Udayavani |

ಹರಪನಹಳ್ಳಿ: ರಾಜ್ಯದ ಸಜ್ಜನ ನಡೆಯ ಅನಂತಕುಮಾರ್‌ ಇನ್ನು ನೆನಪು ಮಾತ್ರ ಎಂದು ತಾಲೂಕು ಬಿಜೆಪಿ ಅಧ್ಯಕ್ಷರಾದ ಕೆ. ಲಕ್ಷ್ಮಣ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ಎಚ್‌ ಎನ್‌. ಅನಂತಕುಮಾರ್‌ ನಿಧನಕ್ಕೆ ಬಿಜೆಪಿ ಮುಖಂಡರು ಒಂದು ನಿಮಿಷ ಮೌನಾಚರಣೆ ಮಾಡುವುದರ ಮೂಲಕ ಸಂತಾಪ ಸೂಚಿಸಿ, ಕೇಂದ್ರ ಸಚಿವರಾಗಿ ಅನಂತಕುಮಾರ್‌ ಕೊಡುಗೆ ಕರ್ನಾಟಕಕ್ಕೆ ಅಪಾರವಾಗಿದೆ. ಸರಳ, ಸಜ್ಜನ ರಾಜಕಾರಣಿ ಅನಂತಕುಮಾರ್‌ ಇನ್ನು ನೆನಪು ಮಾತ್ರ ಎಂದರು.

Advertisement

ಸಂತಾಪ ಸೂಚಕ ಸಭೆಯಲ್ಲಿ ಬಿಜೆಪಿ ಮುಖಂಡರಾದ ಎಂ.ಪಿ. ನಾಯಕ್‌, ಕಣಿವಿಹಳ್ಳಿ ಮಂಜುನಾಥ, ಎಲ್‌.ಮಂಜ್ಯಾನಾಯ್ಕ, ಸತ್ಯನಾರಾಯಣ, ರಾಘವೇಂದ್ರ ಶೆಟ್ಟಿ, ಟಿ. ಲೋಕೇಶ್‌, ನಿಟ್ಟೂರು ಹಾಲಪ್ಪ, ಬಾಗಳಿ ಕೊಟ್ರೇಶಪ್ಪ, ಕೆ. ಕೃಷ್ಣ, ಎಲ್‌. ನಿಂಬ್ಯಾನಾಯ್ಕ, ತೊಗರಿಕಟ್ಟಿ ಈ. ಗಂಗಪ್ಪ, ಗಂಗಮ್ಮ, ರೇಖಮ್ಮ, ಸುವರ್ಣಮ್ಮ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next