Advertisement

ಸಂವಿಧಾನ ನಾಶ ಮಾಡುವ ಯತ್ನ ನಡೆದಿದೆ: ಪ್ರಿಯಾಂಕಾ

02:03 AM Apr 15, 2019 | Team Udayavani |

ಅಸ್ಸಾಂನ ಸಿಲ್‌ಚಾರ್‌ನಲ್ಲಿ ರೋಡ್‌ ಶೋ ನಡೆಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, “ದೇಶದ ಪವಿತ್ರ ಸಂವಿಧಾನಕ್ಕೆ ಹಾಲಿ ಆಡಳಿತವು ಗೌರವ ಕೊಡುತ್ತಿಲ್ಲ. ಸಂವಿಧಾನವನ್ನು ನಾಶ ಮಾಡಲು ಕೆಲವರು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

Advertisement

ಮಹಾಪುರುಷ ಅಂಬೇಡ್ಕರ್‌ ಅವರು ಸಂವಿಧಾನದ ಮೂಲದ ಈ ದೇಶಕ್ಕೆ ಅಡಿಪಾಯ ಹಾಕಿಕೊಟ್ಟರು. ಅಂಥ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ.

ಆದರೆ, ಈಗಿನ ಸರಕಾರ ಸಂವಿಧಾನವನ್ನೇ ನಾಶ ಮಾಡಲು ಹೊರಟಿದೆ ಎಂದೂ ಪ್ರಿಯಾಂಕಾ ಹೇಳಿದ್ದಾರೆ. ಇದೇ ವೇಳೆ, ಉ.ಪ್ರದೇಶದ ವಾರಾಣಸಿಯನ್ನು ಪ್ರಧಾನಿ ಮೋದಿ ನಿರ್ಲಕ್ಷಿಸಿದ್ದಾರೆ ಎಂದೂ ಆರೋಪಿಸಿದ ಪ್ರಿಯಾಂಕಾ, ಕಳೆದ 5 ವರ್ಷಗಳಲ್ಲಿ ವಾರಾಣಸಿಯ ಯಾರೊಬ್ಬರ ಜೊತೆಗೂ ಮೋದಿ 5 ನಿಮಿಷವನ್ನೂ ಕಳೆದಿಲ್ಲ. ಅಮೆರಿಕ, ಚೀನ, ರಷ್ಯಾ, ಆಫ್ರಿಕಾಗೆ ಹೋಗಿ ಅಲ್ಲಿನ ನಾಯಕರನ್ನು ಆಲಿಂಗಿಸಲು, ಪಾಕಿಸ್ಥಾನಕ್ಕೆ ಹೋಗಿ ಬಿರಿಯಾನಿ ತಿನ್ನಲು ಮೋದಿಯವರಿಗೆ ಸಮಯವಿದೆ. ಆದರೆ, ತಮ್ಮ ಸ್ವಂತ ಕ್ಷೇತ್ರದಲ್ಲಿ ಜನರೊಂದಿಗೆ ಸಂವಾದ ನಡೆಸಿ, ಅವರ ಕಷ್ಟಸುಖ ಅರಿಯಲು ಅವರಿಗೆ ಸಾಧ್ಯವಾಗಿಲ್ಲ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next