Advertisement

Ullal; ಡಾ.ಅಮೃತ ಸೋಮೇಶ್ವರ ಅವರ ಅಂತ್ಯಸಂಸ್ಕಾರ

12:15 AM Jan 08, 2024 | Team Udayavani |

ಉಳ್ಳಾಲ: ಕರಾವಳಿಯ ಮೇರು ಯಕ್ಷಗಾನ ಪ್ರಸಂಗ ಕತೃ, ಸಂಶೋಧಕ ಡಾ| ಅಮೃತ ಸೋಮೇಶ್ವರ ಅವರ ಅಂತ್ಯಸಂಸ್ಕಾರವು ರವಿವಾರ ಕೋಟೆಕಾರು ಮಾಡೂರಿನ ರುದ್ರಭೂಮಿಯಲ್ಲಿ ನೆರವೇರಿತು.

Advertisement

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಗ್ಗೆ ನಿಧನ ಹೊಂದಿದ್ದರು. ಶನಿವಾರ ಸಂಜೆ 5 ಗಂಟೆಯ ಬಳಿಕ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಸೋಮೇಶ್ವರದಲ್ಲಿರುವ ಅವರ ನಿವಾಸ “ಒಲುಮೆ’ಯಲ್ಲಿ ಇರಿಸಲಾಗಿತ್ತು. ಶನಿವಾರ ಸಂಜೆಯಿಂದ ರವಿವಾರ ಪೂರ್ವಾಹ್ನ 11.30ರ ವರೆಗೆ ಸಹಸ್ರಾರು ಹಿತೈಷಿಗಳು, ಸಾಹಿತಿಗಳು, ಅವರ ಸಹವರ್ತಿಗಳು, ಜನಪ್ರತಿನಿಧಿಗಳು ಆಗಮಿಸಿ ಅಂತಿಮ ದರ್ಶನ ಪಡೆದರು.

ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌, ಸಂದ ನಳಿನ್‌ ಕುಮಾರ್‌ ಕಟೀಲು, ಶಾಸಕ ಡಾ| ಭರತ್‌ ಶೆಟ್ಟಿ, ಮಾಜಿ ಶಾಸಕರಾದ ಕೆ. ಜಯರಾಮ ಶೆಟ್ಟಿ, ಜೆ.ಆರ್‌. ಲೋಬೋ, ಐವನ್‌ ಡಿ’ಸೋಜಾ, ವಿಶ್ರಾಂತ ಕುಲಪತಿಗಳಾದ ಡಾ| ಬಿ.ಎ. ವಿವೇಕ್‌ ರೈ, ಡಾ| ಕೆ. ಚಿನ್ನಪ್ಪ ಗೌಡ, ಯಕ್ಷಗಾನ ವಿದ್ವಾಂಸ ಡಾ| ಪ್ರಭಾಕರ ಜೋಷಿ, ಸಾಹಿತಿ ಡಾ| ತಾಳ್ತಜೆ ವಸಂತ ಕುಮಾರ್‌, ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ ಮೊದಲಾದ ಗಣ್ಯರು ಅಂತಿಮ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next