Advertisement

ಮೋದಿ ಮಾದರಿ ಆಡಳಿತ

11:57 PM Jan 17, 2021 | Team Udayavani |

ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ರವಿವಾರ ಬಿಎಸ್‌ವೈ ಅವರನ್ನು ಮೋದಿಯವರಿಗೆ ಹೋಲಿಸಿದ್ದಾರೆ. ಪ್ರಧಾನಿ ಮೋದಿ ಸ್ವತ್ಛ ಮತ್ತು ಉತ್ತಮ ಆಡಳಿತ ನೀಡುತ್ತಿದ್ದು, ಕರ್ನಾಟಕದಲ್ಲೂ ಯಡಿಯೂರಪ್ಪ ಜನಮೆಚ್ಚುವಂತೆ ಅಂಥದ್ದೇ ಆಡಳಿತ ನೀಡುತ್ತಿದ್ದಾರೆ ಎಂದು ಶ್ಲಾ ಸಿದ್ದಾರೆ.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ನಡೆದ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಸರಕಾರ ಉಳಿದ ರಾಜ್ಯಗಳಿಗೆ ಮಾದರಿ. ಕ್ರಾಂತಿಕಾರಕ ಕ್ರಮಗಳಿಂದ ದೇಶದ ಜನರಲ್ಲಿ ಮೋದಿ ಆಡಳಿತದ ಬಗ್ಗೆ ವಿಶ್ವಾಸ ಮೂಡಿದೆ. ಕರ್ನಾಟಕದಲ್ಲೂ ಯಡಿಯೂರಪ್ಪ ನೇತೃತ್ವದ ಸರಕಾರದಿಂದ ಪ್ರಗತಿ ಕಾಣುತ್ತಿದೆ. ಜನರಲ್ಲಿ ಹೊಸ ಭರವಸೆ ಮೂಡಿದೆ. ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಾವಿರಾರು ಸದಸ್ಯರು ಆಯ್ಕೆಯಾಗಿರುವುದೇ ಇದಕ್ಕೆ ಸಾಕ್ಷಿ. ಯಡಿಯೂರಪ್ಪ ಅವರಿಗೆ ಮನಃಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಅವರ ಅನುಭವದ ನೇತೃತ್ವದಲ್ಲಿ ಕರ್ನಾಟಕವು ಕೊರೊನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಕಾಂಗ್ರೆಸ್‌ ಏನು ಮಾಡಿದೆ? :

10 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್‌ ಕರ್ನಾಟಕಕ್ಕೆ ಏನು ಕೊಡುಗೆ ನೀಡಿದೆ, ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬುದನ್ನು ಅಂಕಿ-ಅಂಶಗಳ ಸಮೇತ ಬಹಿರಂಗಪಡಿಸಲಿ. ಕರ್ನಾಟಕಕ್ಕೆ ನೀಡಿದ ಕೊಡುಗೆ ಬಗ್ಗೆ ಕಾಂಗ್ರೆಸ್‌ ಬಳಿ ದಾಖಲೆಗಳೇ ಇಲ್ಲ. ಆದರೆ ನಮ್ಮ ಬಳಿ ಇದೆ. ಕಾಂಗ್ರೆಸ್‌ ಕರ್ನಾಟಕಕ್ಕೆ 13ನೇ ಹಣಕಾಸು ಯೋಜನೆಯಡಿ 88,583 ಕೋ.ರೂ. ಹಣ ನೀಡಿದೆ. ಆದರೆ ಮೋದಿ ಸರಕಾರ 2014ರಿಂದ 2019ರ ವರೆಗೆ ಕರ್ನಾಟಕಕ್ಕೆ 2,19,506 ಕೋ.ರೂ. ನೀಡಿದೆ ಎಂದರು.

ಮೋದಿ ನೇತೃತ್ವದಲ್ಲಿ 7 ಕೋಟಿ ಮನೆಗಳ ಸದಸ್ಯರಿಗೆ ಬ್ಯಾಂಕ್‌ ಖಾತೆ ತೆರೆಯಲಾಯಿತು. 13 ಕೋಟಿ ಮನೆಗಳಿಗೆ ಉಜ್ವಲ ಗ್ಯಾಸ್‌ ಒದಗಿಸಲಾಯಿತು. 60 ಕೋಟಿ ಜನರಿಗೆ ಆಯುಷ್ಮಾನ್‌ ಯೋಜನೆಯಡಿ ಆರೋಗ್ಯ ಸೌಲಭ್ಯ ಒದಗಿಸಲಾಯಿತು. 2022ರ ವೇಳೆಗೆ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಸಂಕಲ್ಪ ಮಾಡಲಾಗಿದೆ ಎಂದರು.

Advertisement

ಮೋದಿ ಸರಕಾರ 370ನೇ ವಿಧಿಯನ್ನು ಕಿತ್ತೂಗೆಯಿತು. ಪರಿಣಾಮವಾಗಿ ಜಮ್ಮು-ಕಾಶ್ಮೀರ ದಲ್ಲಿ ಈಗ ಸಂಪೂರ್ಣ ಶಾಂತಿ ನೆಲೆಸಿದೆ. ಮೋದಿ ಎರಡನೇ ಬಾರಿಗೆ ಪ್ರಧಾನಿಯಾದಾಗ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಇದೆಲ್ಲ ಕಾಂಗ್ರೆಸ್‌ನಿಂದ ಏಕೆ ಸಾಧ್ಯವಾಗಲಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಹೆದರದೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ

ಮೋದಿ ಸರಕಾರ ಕೋವಿಡ್ ಮಹಾಮಾರಿಯನ್ನು ಸಮರ್ಥವಾಗಿ ನಿಯಂತ್ರಿಸಿದೆ. ಆದರೆ ಇದನ್ನೂ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ನಮ್ಮ ವಿಜ್ಞಾನಿಗಳು ಶ್ರಮಪಟ್ಟು ಲಸಿಕೆ ತಯಾರಿಸಿದರೆ ಅಲ್ಲೂ ಅನುಮಾನ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್‌ ಸಂಸ್ಕೃತಿ. ಲಸಿಕೆಯ ವಿಚಾರದಲ್ಲಿ ಕಾಂಗ್ರೆಸ್‌ ಮಾತನ್ನು ನಂಬಬೇಡಿ. ಅಂಜಿಕೆಯಿಲ್ಲದೇ ಲಸಿಕೆ ಹಾಕಿಸಿಕೊಳ್ಳಿ. ಕರ್ನಾಟಕದಲ್ಲಿ ಆತ್ಮನಿರ್ಭರ ಯೋಜನೆಯಡಿ ಅನೇಕ ಘಟಕಗಳು ನಿರ್ಮಾಣವಾಗಿವೆ. ಲಕ್ಷಾಂತರ ಜನರಿಗೆ ಉದ್ಯೋಗ ಸಿಕ್ಕಿದೆ. ಕೊಪ್ಪಳದಲ್ಲಿ ನಿರ್ಮಾಣವಾಗಲಿರುವ ಆಟಿಕೆ ತಯಾರಿಕೆ ಘಟಕ ಚೀನದ ಮೇಲಿನ ಅವಲಂಬನೆಯನ್ನು ದೂರ ಮಾಡಲಿದೆ ಎಂದು ಶಾ ಹೇಳಿದರು.

ನಗು ಮುಖದ ಅಂಗಡಿ ಮರೆಯಲಾಗದು :

ಸುರೇಶ ಅಂಗಡಿ ಅವರನ್ನು ನೆನಪಿಸಿಕೊಂಡ ಅಮಿತ್‌ ಶಾ, ಸದಾ ನಗುಮುಖ ಹೊಂದಿದ್ದ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕ್ರಿಯಾಶೀಲರಾಗಿದ್ದ ಅವರು ಮುಂದೆ ದಿಗ್ಗಜ ನಾಯಕರಾಗುವ ಎಲ್ಲ ಅವಕಾಶ ಹೊಂದಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು ಎಂದು ಭಾವುಕರಾದರು.

ಕರ್ನಾಟಕದಲ್ಲಿ ಬಿಜೆಪಿ :

ಮತ್ತಷ್ಟು ಗಟ್ಟಿಯಾಗಿದೆ. ಮುಂಬರುವ ತಾ.ಪಂ., ಜಿ.ಪಂ.ಚುನಾವಣೆ ಯಲ್ಲೂ ಬಿಜೆಪಿ ಶೇ. 75ಕ್ಕೂ ಹೆಚ್ಚು ಸ್ಥಾನಗಳಲ್ಲಿ  ಗೆಲ್ಲಲಿದೆ. ಮುಂದಿನ ವಿಧಾನಸಭೆ ಚುನಾವಣೆ ಯಲ್ಲಿ 150 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ. – ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಹಣಬಲ, ತೋಳ್ಬಲದಿಂದ ಚುನಾವಣೆ ಗೆಲ್ಲಬಹುದು ಎಂದು ಕಾಂಗ್ರೆಸ್‌ ಕನಸು ಕಾಣುತ್ತಿತ್ತು. ಆದರೆ ಇದೆಲ್ಲವನ್ನೂ ಮೆಟ್ಟಿನಿಂತು ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಿದೆ.  -ಬಿ.ಎಸ್‌. ಯ ಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next