Advertisement

ಶಾ ಮುಂದೆ ಅತೃಪ್ತರ ದೂರು?

12:20 AM Jan 16, 2021 | Team Udayavani |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ರಾಜ್ಯ ಬಿಜೆಪಿ ಯಲ್ಲಿ ಅಸಮಾಧಾನ ಸ್ಫೋಟ ಗೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ದೂರು ನೀಡಲು ಕೆಲವು ಅತೃಪ್ತರು ಮುಂದಾಗಿದ್ದಾರೆ. ಶಾ ಆಗಮನದ ಹಿನ್ನೆಲೆಯಲ್ಲಿ ವಿಶೇಷ ಕೋರ್‌ ಕಮಿಟಿ ಸಭೆ ಕರೆಯಲಾಗಿದ್ದು, ರಾಜ್ಯದ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆಯಾಗಲಿದೆ.

Advertisement

ಶಾ 2 ದಿನಗಳ ರಾಜ್ಯದಲ್ಲಿರುತ್ತಾರೆ. ಶನಿವಾರ ಸಂಜೆ ವಿಧಾನಸೌಧದಲ್ಲಿ ಸರಕಾರಿ ಕಾರ್ಯಕ್ರಮದ ಬಳಿಕ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಲಿದ್ದು, ಅಲ್ಲಿಯೇ ಪಕ್ಷದ ಕೋರ್‌ ಕಮಿಟಿ ಸಭೆ ನಡೆಯಲಿದೆ.

ಸಂಪುಟ ವಿಸ್ತರಣೆಯ ಬಳಿಕದ ಬೆಳವಣಿಗೆಗಳು, ವಿವಿಧ ಉಪ ಚುನಾವಣೆಗಳು, ಪಕ್ಷ ಸಂಘಟನೆ; ತಾಲೂಕು ಮತ್ತು ಜಿ.ಪಂ. ಚುನಾವಣೆಗಳಿಗೆ ಪಕ್ಷದ ಸಿದ್ಧತೆ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಸಿಎಂ ಜತೆ ಪ್ರತ್ಯೇಕ ಸಭೆ :

ಶನಿವಾರ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯುವ ಪೋಲಿಸ್‌ ಕ್ವಾರ್ಟರ್ಸ್‌ ಉದ್ಘಾಟನೆಯ ಬಳಿಕ ವಿಧಾನ ಸೌಧದ 3ನೇ ಮಹಡಿ ಯಲ್ಲಿ ರುವ ಸಿಎಂ ಕಚೇರಿಗೆ ತೆರಳಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಲು ಶಾ ತೀರ್ಮಾನಿಸಿದ್ದಾರೆ.

Advertisement

ಭದ್ರಾವತಿಗೆ ಅಮಿತ್‌ ಶಾ :

ಅಮಿತ್‌ ಶಾ ಅವರು ಜ. 16ರ ಅಪರಾಹ್ನ 1ಕ್ಕೆ  ಭದ್ರಾವತಿಯಲ್ಲಿ ಆರ್‌ಎಎಫ್ ಪಡೆ ಕೇಂದ್ರದಲ್ಲಿ ಶಂಕುಸ್ಥಾಪನೆ ಮತ್ತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 3.15ಕ್ಕೆ  ಬೆಂಗಳೂರಿನ ಕಾರ್ಯ ಕ್ರಮ ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜ. 17ರ ಬೆಳಗ್ಗೆ ಬೆಳಗಾವಿಗೆ ತೆರಳಿ ದಿನಪೂರ್ತಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next