Advertisement

Bollywood: ʼರಾಮಾಯಣʼದಲ್ಲಿ ʼದಶರಥʼನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರ ಬಿಗ್‌ ಬಿ ಅಮಿತಾಭ್?‌

06:46 PM Feb 13, 2024 | Team Udayavani |

ಮುಂಬಯಿ: ನಿರ್ದೇಶಕ ನಿತೇಶ್‌ ಕುಮಾರ್‌ ಅವರ ಬಿಗ್‌ ಬಜೆಟ್‌ ʼರಾಮಾಯಣʼ ಸಿನಿಮಾದ ಕುರಿತು ದಿನಕ್ಕೊಂದರಂತೆ ಹೊಸ ಅಪ್ಡೇಟ್‌ ಗಳು ಹೊರಬೀಳುತ್ತಿದೆ. ಇದೀಗ ಈ ಸಿನಿಮಾದಲ್ಲಿ ನಟಿಸಲಿರುವ ಪಾತ್ರದ ಕುರಿತು ಮತ್ತೊಂದು ಅಪ್ಡೇಟ್‌ ಹೊರಬಿದ್ದಿದೆ.

Advertisement

ನಟ ರಣ್ಬೀರ್‌ ಕಪೂರ್‌ ʼರಾಮʼನಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಪಾತ್ರಕ್ಕೆ ಚಾಕ್ಲೇಟ್‌ ಬಾಯ್‌ ರಣ್ಬೀರ್‌ ಸಾಕಷ್ಟು ತಯಾರಿಯನ್ನು ನಡೆಸಿಕೊಂಡಿದ್ದಾರೆ. ನಿರ್ದೇಶಕರು ಕೂಡ ಸಿನಿಮಾಕ್ಕಾಗಿ ಹತ್ತಾರು ಕೆಲಸದಲ್ಲಿ ನಿರತರಾಗಿದ್ದಾರೆ. ಸಿನಿಮಾದಲ್ಲಿ ನಟಿಸಲಿರುವ ಪಾತ್ರಗಳ ಬಗ್ಗೆ ಕುತೂಹಲ ಹೆಚ್ಚಿದೆ.

ಸಿನಿಮಾದಲ್ಲಿ ಮಲ್ಟಿಸ್ಟಾರ್ಸ್‌ ಇರಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ದಕ್ಷಿಣದ ಖ್ಯಾತ ನಟ ವಿಜಯ್‌ ಸೇತುಪತಿ ಅವರು ರಾವಣನ ಸಹೋದರ ʼವಿಭೀಷಣʼ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೀಗ ʼರಾಮಯಣʼ ಮತ್ತೊಂದು ಪ್ರಧಾನ ಪಾತ್ರವಾದ ʼದಶರಥʼ ನಾಗಿ ಬಿಟೌನ್‌ ನ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ.

ಅಮಿತಾಭ್‌ ಅವರು ʼದಶರಥʼ ನಾಗಿ ಪಾತ್ರಕ್ಕೆ ಬಣ್ಣ ಹಚ್ಚುವುದು ಅಧಿಕೃತ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಮಾಹಿತಿ ಬರಬೇಕಿದೆ. ಒಂದು ವೇಳೆ ಇದು ಅಧಿಕೃತವಾದರೆ ರಣ್ಬೀರ್‌ ಜೊತೆ ಅಮಿತಾಭ್ ʼಬ್ರಹ್ಮಾಸ್ತ್ರ ಪಾರ್ಟ್‌ -1: ಶಿವʼನ ಬಳಿಕ ಮತ್ತೊಮ್ಮೆ ನಟಿಸುವಂತಾಗುತ್ತದೆ.

ʼರಾಮಾಯಣʼ ರಾಮನಾಗಿ ರಣ್ಬೀರ್‌ ಕಪೂರ್‌ ಕಾಣಿಸಿಕೊಳ್ಳಲಿದ್ದು, ಸೀತೆಯಾಗಿ ಸಾಯಿಪಲ್ಲವಿ, ರಾವಣನಾಗಿ ಯಶ್‌ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಡಿಯೋಲ್‌ ಅವರು ʼಹನುಮಾನ್‌ʼ ಆಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

Advertisement

ಮಾರ್ಚ್‌ ಮೊದಲ ವಾರದಲ್ಲಿ ʼರಾಮಾಯಣʼ ಸಿನಿಮಾದ ಶೂಟಿಂಗ್‌ ಆರಂಭಗೊಳ್ಳುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next