Advertisement

ಅಮಿತ್‌ ಶಾ- ನಾಯ್ಡು ಪತ್ರ ಸಮರ

06:00 AM Mar 25, 2018 | |

ಹೊಸದಿಲ್ಲಿ: ಎನ್‌ಡಿಎ ತೊರೆದಿರುವ ಟಿಡಿಪಿ ನಿರ್ಧಾರ ದುರದೃಷ್ಟಕರ ಮತ್ತು ಏಕಪಕ್ಷೀಯವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅಭಿಪ್ರಾಯಪಟ್ಟಿದ್ದಾರೆ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡುಗೆ ಬರೆದಿರುವ ಪತ್ರದಲ್ಲಿ ಶಾ ಈ ಅಂಶ ಉಲ್ಲೇಖೀಸಿದ್ದಾರೆ. ಕೇಂದ್ರ ಸರಕಾರ ತೆಲುಗು ಭಾಷಿಕರ ಹಿತ ಕಾಯ್ದುಕೊಂಡು ಬಂದಿದೆ. ಹೀಗಾಗಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಆಂಧ್ರಪ್ರದೇಶಕ್ಕೆ ನೀಡಿದ ವಾಗ್ಧಾನ ಪೂರೈಸಿಲ್ಲ ಎಂಬ ವಾದ ಸರಿಯಲ್ಲ ಎಂದು ಶಾ ಹೇಳಿದ್ದಾರೆ.  

Advertisement

ಎನ್‌ಡಿಎ ತೊರೆಯುವ ನಿರ್ಧಾರ ರಾಜಕೀ ಯಾತ್ಮಕವಾಗಿತ್ತು. ಆಂಧ್ರಪ್ರದೇಶಕ್ಕೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಕೇಂದ್ರ ಸರಕಾರ ಆಂಧ್ರಕ್ಕೆ ಅನುಮೋದನೆ ನೀಡಲಾಗಿರುವ ಐದು ಪ್ರಮುಖ ಕಾಮಗಾರಿಗಳನ್ನೂ ಅವರು ಪ್ರಸ್ತಾಪಿಸಿದ್ದಾರೆ.

ಸುಳ್ಳೇಕೆ ಹೇಳುತ್ತಿದ್ದೀರಿ?: ಅಮಿತ್‌ ಶಾ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬಿಜೆಪಿ ಅಧ್ಯಕ್ಷರು ಬರೆದ ಪತ್ರದಲ್ಲಿ ಸಂಪೂರ್ಣ ತಪ್ಪು ಮಾಹಿತಿ ಇದೆ ಎಂದಿದ್ದಾರೆ. ಈಶಾನ್ಯ ರಾಜ್ಯಗಳಿಗೆ ವಿಶೇಷ ನೆರವು ನೀಡುವ ಕೇಂದ್ರ ಅದೇ ಮಾದರಿ ನೆರವನ್ನು ರಾಜ್ಯಕ್ಕೆ ನೀಡಿದ್ದರೆ ದೊಡ್ಡ ದೊಡ್ಡ ಕೈಗಾರಿಕೆಗಳು ಬರುತ್ತಿದ್ದವು ಎಂದು ಹೇಳಿದ್ದಾರೆ. ಜತೆಗೆ, ಶಾ ಅವರೇ, ಏಕೆ ಸುಳ್ಳು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next