Advertisement

ಅಮಿತ್‌ ಶಾಗೆ ಹರಿಪ್ರಸಾದ್‌ ಸವಾಲು

07:30 AM Mar 11, 2018 | Team Udayavani |

ಬೆಂಗಳೂರು: ಗುಜರಾತ್‌ಗಿಂತ ಕರ್ನಾಟಕ ಅಭಿವೃದ್ಧಿಯಾಗಿರುವ  ಬಗ್ಗೆ ಬಿಜೆಪಿ  ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜತೆಗೆ ಬಹಿರಂಗ ಚರ್ಚೆಗೆ ಸಿದ್ಧ  ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್‌ ಆಹ್ವಾನ ನೀಡಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಗ್ರಹಿಸಿದ್ದಾರೆ. ಅಮಿತ್‌ ಶಾ ಗುಜರಾತ್‌ನ ಗೃಹ ಸಚಿವರಾಗಿದ್ದಾಗ ಹರೇನ್‌ ಪಾಂಡ್ಯ ಹತ್ಯೆಯಾಗಿತ್ತು. ಕಳೆದ ಒಂದು ವರ್ಷದಲ್ಲಿ ಉತ್ತರ ಪ್ರದೇಶದಲ್ಲಿ 900 ನಕಲಿ ಎನ್‌ಕೌಂಟರ್‌ಗಳಾಗಿವೆ. ಗುರುದಾಸ್‌ಪುರದಲ್ಲಿ ಪಾಕಿಸ್ಥಾನಿ ಉಗ್ರರು ಎಸ್ಪಿ ಮೇಲೆ ದಾಳಿ ಮಾಡಿದರು. ಬಿಜೆಪಿಯವರು ಸರ್ಜಿಕಲ್‌ ಸ್ಟೈಕ್‌ ಹೆಸರಿನಲ್ಲಿ  ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆಂದು ಅವರು ತಿಳಿಸಿದರು.

ಬಿಜೆಪಿಯು ಉತ್ತರ ಭಾರತದ ಗೂಂಡಾ ಸಂಸ್ಕೃತಿಯನ್ನು ಕರ್ನಾಟಕದಲ್ಲಿ ಬಳಕೆ ಮಾಡಲು ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ 23 ಹಿಂದೂಗಳ ಕೊಲೆಯಾಗಿದೆ ಎಂದು ಸುಳ್ಳು ಆರೋಪ ಮಾಡ ಲಾಗುತ್ತಿದೆ. ಅವುಗಳಲ್ಲಿ 14 ಕೊಲೆಗಳನ್ನು   ವೈಯಕ್ತಿಕ ಕಾರಣಗಳಿಗಾಗಿ ಹಿಂದೂಗಳೆ ಮಾಡಿದ್ದಾರೆ. ಬಿಜೆಪಿ ಯವರು ಸತ್ಯ ಮುಚ್ಚಿಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಅದರಿಂದ ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಇದು ಸಾಧ್ಯವಿಲ್ಲ  ಎಂದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ರೇವ್‌
ಪಾರ್ಟಿಗಳು, ಚುಂಬನ ದೃಶ್ಯಗಳು, ಚೆಕ್‌ ಮೂಲಕ
ಲಂಚ ತೆಗೆದುಕೊಂಡಿರುವ ದಾಖಲೆಗಳನ್ನು ನೋಡಿ ದ್ದೇವೆ. ಬಿಜೆಪಿಯನ್ನು ಗೋಡ್ಸೆ ಸಂತತಿಯವರು ಆಳುತ್ತಿದ್ದಾರೆ. ಅವರಿಂದ ದೇಶಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದರು. ಕರ್ನಾ ಟಕದಲ್ಲಿ ಹಿಂದುತ್ವ ಇಟ್ಟುಕೊಂಡು ರಾಜಕೀಯ ಮಾಡಲು ಸಾಧ್ಯವಿಲ್ಲ. 

ಸಾವರ್ಕರ್‌ ಹಿಂದುತ್ವ ಸ್ಲೋಗನ್‌ ಮಾಡಿಕೊಂಡಿದ್ದರು. ಅವರ ಘೋಷಣೆಗೂ ಹಿಂದುತ್ವಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದರು. ಅಶೋಕ್‌ ಖೇಣಿ, ಆನಂದ್‌ ಸಿಂಗ್‌ ನಾಯಕರಲ್ಲ: ಆನಂದ್‌ ಸಿಂಗ್‌ ಹಾಗೂ ಖೇಣಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡು ಭ್ರಷ್ಟಾಚಾರದ ವಿರುದ್ಧ  ಮಾತನಾಡಲು ನಿಮಗೇನು ನೈತಿಕತೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಶೋಕ್‌ ಖೇಣಿ ಹಾಗೂ ಆನಂದ್‌ ಸಿಂಗ್‌ ನಮ್ಮ ಪಕ್ಷದ ನಾಯಕತ್ವ ವಹಿಸಿಕೊಂಡಿಲ್ಲ. ಆನಂದ್‌ ಸಿಂಗ್‌ ಜೈಲಿಗೆ ಹೋಗಲು ಯಾರು ಕಾರಣ ಅಂತ ಚುನಾವಣೆಯಲ್ಲಿ ಅವರೇ ಹೇಳುತ್ತಾರೆ.

Advertisement

ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭ್ರಷ್ಟಾಚಾರದ ಹಿನ್ನೆಲೆಯಲ್ಲಿಯೇ ಅವರ ಪಕ್ಷದವರೇ ಅವರನ್ನು ಜೈಲಿಗೆ ಕಳುಹಿಸಿದ್ದರು. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ  ತಮ್ಮ ಚರಿತ್ರೆಯನ್ನೂ ನೋಡಿಕೊಳ್ಳಬೇಕು ಎಂದು ಹೇಳಿದರು.  ರಾಜ್ಯ ಸರಕಾರದ ಮೇಲೆ ಕಮಿಷನ್‌ ಬಗ್ಗೆ ಆರೋಪ ಮಾಡುವ ಪ್ರಧಾನಿ ಕೇಂದ್ರ ಸರಕಾರದ ಅಧೀನದಲ್ಲಿಯೇ ತನಿಖಾ ಸಂಸ್ಥೆಗಳಿವೆ. ಆ ಸಂಸ್ಥೆಗಳಿಂದಲೇ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಲೋಕಾಯುಕ್ತರ ಮೇಲೆ ಹಲ್ಲೆ: ರಾಜಸ್ಥಾನಿ ಮನಃಸ್ಥಿತಿ
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ  ಮೇಲೆ ಮಾರಣಾಂತಿಕ ಹಲ್ಲೆ  ಮಾಡಿರುವ ವ್ಯಕ್ತಿ ರಾಜಸ್ಥಾನ ಮೂಲದವರಾಗಿದ್ದು, ಅದು ರಾಜಸ್ಥಾನದ ಬಿಜೆಪಿಯ ಮನಃಸ್ಥಿತಿ ಎಂದು ಹರಿಪ್ರಸಾದ್‌ ಆರೋಪಿಸಿದ್ದಾರೆ. ರಾಜಸ್ಥಾನದಲ್ಲಿ  ಬಿಜೆಪಿಯವರು ಅಪರಾಧಿ ಮನೋಭಾವನೆಯನ್ನು ಬಿತ್ತುತ್ತಿದ್ದಾರೆ. ಅದರ ಪರಿಣಾಮವೇ ಆ ವ್ಯಕ್ತಿ ಲೋಕಾಯುಕ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next