Advertisement

 ರಾಜ್ಯದಲ್ಲಿ ಅಮಿತ್‌ ಶಾ ಕ್ರಿಮಿನಲ್‌ ಚಟುವಟಿಕೆ ನಡೆಸ್ಬಹುದು!

04:11 PM Aug 13, 2017 | |

ಕಲಬುರಗಿ: ‘ರಾಜ್ಯದಲ್ಲಿ ಅಮಿತ್‌ ಶಾ ಕ್ರಿಮಿನಲ್‌ ಚಟುವಟಿಕೆ ನಡೆಸಬಹುದೇ ಹೊರತು  ಅವರ ತಂತ್ರಗಾರಿಕೆ ಇಲ್ಲಿ ಕೆಲಸ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

Advertisement

ಅಳಂದದಲ್ಲಿ ಭಾನುವಾರ ಮಾತನಾಡಿ ‘ಬಿಜೆಪಿ ವಿರುದ್ಧ ಕಿಡಿ ಕಾರಿದ ಅವರು ‘ಅಮಿತ್‌ ಶಾ ಸ್ಟ್ರಾಟಜಿ ಇಲ್ಲಿ ಕೆಲಸ ಮಾಡುವುದಿಲ್ಲ.ಯಾರದ್ದೋ ಮನೆಯ ಮೇಲೆ ಐಟಿ ದಾಳಿ ಮಾಡಬಹುದು, ಸಿಬಿಐ ದಾಳಿ ನಡೆಸಬಹುದು,ಇಡಿ ಬಿಡಬಹುದು, ಆದರೆ ಇದು ಬಸವಣ್ಣನ ನಾಡು, ಕನಕದಾಸರ ನಾಡು ಜಾತ್ಯಾತೀತ ತತ್ವ ಇಲ್ಲಿದೆ.ಅವರ ತಂತ್ರಗಾರಿಕೆ ಇಲ್ಲಿ ಕೆಲಸ ಮಾಡುವುದಿಲ್ಲ.ಅಲ್ಲಾ.. ಅವರು ಜೈಲಿಗೆ ಹೊದವರನ್ನು ಪಕ್ಕದಲ್ಲಿ  ಕೂರಿಸಿಕೊಂಡು ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಎನ್ನುತ್ತಿದ್ದಾರೆ’ ಎಂದು ಕಿಡಿ ಕಾರಿದರು. 

ಇದೇ ವೇಳೆ ಯುಪಿಯಲ್ಲಿ ಮಾಡಿದ್ದ ಅಮಿತ್‌ ಶಾ ತಂತ್ರಗಾರಿಕೆ ಪಂಜಾಬ್‌ನಲ್ಲಿ ಏಕೆ ನಡೆಯಲ್ಲಿಲ್ಲ, ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ 150 ಬಿಡಿ 50 ಸ್ಥಾನವೂ ಸಿಗುವುದಿಲ್ಲ ಎಂದು ಭವಿಷ್ಯ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next