Advertisement

ಖೇಲ್‌ರತ್ನಕ್ಕೆ ಪಂಘಲ್‌, ವಿಕಾಸ್‌ ಹೆಸರು

01:52 AM Jun 02, 2020 | Team Udayavani |

ಹೊಸದಿಲ್ಲಿ: ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗಾಗಿ ಖ್ಯಾತ ಬಾಕ್ಸರ್‌ಗಳಾದ ಅಮಿತ್‌ ಪಂಘಲ್‌ ಮತ್ತು ವಿಕಾಸ್‌ ಕೃಷ್ಣನ್‌ ಹೆಸರುಗಳನ್ನು ಭಾರತೀಯ ಬಾಕ್ಸಿಂಗ್‌ ಫೆಡರೇಶನ್‌ ನಾಮನಿರ್ದೇಶನ ಮಾಡಿದೆ.

Advertisement

ಏಶ್ಯನ್‌ ಗೇಮ್ಸ್‌ ಚಾಂಪಿಯನ್‌ ಆಗಿರುವ ಅಮಿತ್‌ ಪಂಘಲ್‌ (52 ಕೆಜಿ), ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಸಾಧಕನಾಗಿದ್ದಾರೆ. ಕಳೆದ ಸತತ ಮೂರು ವರ್ಷಗಳಿಂದ ಇವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತಾದರೂ 2012ರ ಡೋಪ್‌ ಪ್ರಕರಣ ಇದಕ್ಕೆ ಅಡ್ಡಿಯಾಗಿ ಪರಿಣಮಿಸಿತ್ತು. ಆದರೆ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ವಿಕಾಸ್‌ ಕೃಷ್ಣನ್‌ (69 ಕೆಜಿ) 2012ರಲ್ಲೇ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next