Advertisement

ಅಮೇಠಿಯಲ್ಲಿ ರೈಲು ನಿಲುಗಡೆಗೆ ಅಸ್ತು

12:30 AM Jan 05, 2019 | |

ಅಮೇಠಿ/ಹೊಸದಿಲ್ಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ಸೂಪರ್‌ಫಾಸ್ಟ್‌ ರೈಲನ್ನು ನಿಲ್ಲಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಕೇಂದ್ರ ಸಚಿವೆ ಸ್ಮತಿ ಇರಾನಿ ಅವರ ಕೋರಿಕೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಇರಾನಿಗೆ ಪತ್ರ ಬರೆದಿರುವ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌, ಇನ್ನು ಮುಂದೆ ಪ್ರತಾಪ್‌ಗ್ಡ- ಭೋಪಾಲ್‌ ಎಕ್ಸ್‌ಪ್ರೆಸ್‌ ರೈಲು ಅಮೇಠಿಯಿಂದ 31 ಕಿ.ಮೀ. ದೂರವಿರುವ ಜೈಸ್‌ ಸ್ಟೇಷನ್‌ನಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

Advertisement

ಸಚಿವೆ ಇರಾನಿ ಅವರ ಅಮೇಠಿ ಪ್ರವಾಸದ ದಿನವೇ ಈ ವಿಚಾರ ಹೊರಬಿದ್ದಿದೆ. ಇದನ್ನು ಹೊಸ ವರ್ಷದ ಉಡುಗೊರೆ ಎಂದು ಇರಾನಿ ಬಣ್ಣಿಸಿದ್ದಾರೆ. ಇದೇ ವೇಳೆ, ಇಲ್ಲಿ ಮಾತನಾಡಿದ ಇರಾನಿ, “ಉತ್ತರಪ್ರದೇಶ ಮತ್ತು ಬಿಹಾರದ ಕಾರ್ಮಿಕರ ವಿರುದ್ಧವಾಗಿ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಅವರು ಮಾತನಾಡಿದಾಗ ರಾಹುಲ್‌ ಮೌನ ವಹಿಸಿದ್ದೇಕೆ’ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next