Advertisement

ಆಂಬುಲೆನ್ಸ್‌ಗೆ ಬೈಕ್‌ ಢಿಕ್ಕಿ ; ನಾಲ್ವರಿಗೆ ಗಾಯ

09:15 PM Apr 21, 2023 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಹೆಮ್ಮಾಡಿ ಜಂಕ್ಷನ್‌ ಬಳಿ ಬೈಕ್‌ ಆಂಬುಲೆನ್ಸ್‌ಗೆ ಢಿಕ್ಕಿಯಾಗಿ ಅದರಲ್ಲಿದ್ದ ನಾಲ್ವರ ಗಾಯಗೊಂಡ ಘಟನೆ ಎ.20 ರ ಮಧ್ಯಾಹ್ನ 2.30 ರ ಸುಮಾರಿಗೆ ಸಂಭವಿಸಿದೆ.

Advertisement

ಅಪಘಾತದ ಪರಿಣಾಮ ಆಂಬುಲೆನ್ಸ್‌ನಲ್ಲಿದ್ದ ಚಾಲಕ ವಿನಾಯಕ ಕುಪ್ಪಯ್ಯ ನಾಯ್ಕ, ಸಾವಿತ್ರಿ, ಜನಾರ್ಧನ್‌, ಸುಧಾ ಗಾಯಗೊಂಡಿದ್ದಾರೆ.

ವಿನಾಯಕ ಕುಪ್ಪಯ್ಯ ನಾಯ್ಕ ಅವರು ಆಂಬುಲೆನ್ಸ್‌ ಚಲಾಯಿಸುತ್ತಿದ್ದು, ಹೊನ್ನಾವರದಿಂದ ಮಂಗಳೂರು ಆಸ್ಪತ್ರೆಗೆ ರೋಗಿಯಾದ ಸಾವಿತ್ರಿ ಪರಮೇಶ್ವರ್‌ ಅವರನ್ನು ಕರೆದೊಯ್ಯುವಾಗ ಬೈಕ್‌ ಢಿಕ್ಕಿಯಾದ ಪರಿಣಾಮ ಆಂಬುಲೆನ್ಸ್‌ ಟೆಲಿಫೋನ್‌ ಕಂಬಕ್ಕೆ ಢಿಕ್ಕಿಯಾಗಿದೆ.

ಗಾಯಾಳುಗಳನ್ನು ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್‌ ಸವಾರ ಸಂದೀಪ್‌ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next