Advertisement

ಅಂಬಿಲಡ್ಕ ನವಸೇವಾ ವೃಂದದ ವಾರ್ಷಿಕೋತ್ಸವ: ಸಾಧಕರಿಗೆ ಸಮ್ಮಾನ

09:20 AM Apr 13, 2018 | Karthik A |

ಕುಂಬಳೆ: ನವಸೇವಾ ವೃಂದ ಅಂಬಿಲಡ್ಕ ಇದರ ವಾರ್ಷಿಕೋತ್ಸವ, ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ಕ್ಷೇತ್ರದ ವಾರ್ಷಿಕ ಜಾತ್ರೆಯ ದ್ವಿತೀಯ ದಿನದ ಕಾರ್ಯಕ್ರಮ ಜರಗಿತು. ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಬಂಬ್ರಾಣ ಯಜಮಾನ್‌ ನಿತ್ಯಾನಂದ ಅಡ್ಯಂತಾಯ ವಹಿಸಿದರು. ಸಮಾರಂಭದಲ್ಲಿ ನಿವೃತ್ತ ವಿಶ್ರಾಂತ ಪತ್ರಕರ್ತ ಮಲಾರ್‌ ಜಯರಾಮ ರೈ ಅತಿಥಿಯಾಗಿ ಭಾಗವಹಿಸಿದರು. ಸಮಾರಂಭದಲ್ಲಿ ವಿವಿಧ ರಂಗಗಳ ಸಾಧಕ ರಾದ ಮೃದಂಗ ವಿದ್ವಾನ್‌ ಬಾಬು ರೈ ಕೋಟೆಕ್ಕಾರು, ಇಚ್ಲಂಪಾಡಿ ಎಸ್‌.ಬಿ.ಎಸ್‌. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪಿ. ನರಹರಿ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ನಿತಿನ್‌ರಾಜ್‌ ಬತ್ತೇರಿ, ಧನ್ಯಶ್ರೀ ಅಂಬಿಲಡ್ಕ ಅವರನ್ನು ಸಮ್ಮಾನಿಸಲಾಯಿತು. ಬಿ.ಎಸ್‌. ಅಣ್ಣಪ್ಪ ಸ್ವಾಗತಿಸಿದರು. ಭೋಜರಾಜ ಬೆಜಪ್ಪೆ ವಂದಿಸಿದರು.


Advertisement
Advertisement

Udayavani is now on Telegram. Click here to join our channel and stay updated with the latest news.

Next