Advertisement

ಅಂಬೇಡ್ಕರ್‌ ಭಾವಚಿತ್ರ ವಿರೂಪಕ್ಕೆ ಆಕ್ರೋಶ

07:09 AM Jan 19, 2019 | Team Udayavani |

ಶಹಾಬಾದ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರ ವಿರೂಪಗೊಳಿಸಿ ಅಪಲೋಡ್‌ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಭೀಮಸೇನೆ ಕಾರ್ಯಕರ್ತರು ಪಿಎಸ್‌ಐ ಯಲ್ಲಮ್ಮಗೆ ಮನವಿ ಸಲ್ಲಿಸಿದರು.

Advertisement

ಭೀಮಸೇನೆ ಅಧ್ಯಕ್ಷ ಸತೀಶ ಕಂಬಾನೂರ ಮಾತನಾಡಿ, ಅಂಬೇಡ್ಕರ್‌ ಭಾವಚಿತ್ರ ವಿರೂಪಗೊಳಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ವಿನೋದ ದಬಕಿ ಎನ್ನುವನ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಗಡಿಪಾರು ಮಾಡಬೇಕು. ಆತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮುಖಂಡರಾದ ಶರಣಬಸಪ್ಪ ಸುಗೂರ, ಅಶೋಕ ತುತಾರೆ, ಶಿವಶಾಲಕುಮಾರ ಪಟ್ಟಣಕರ್‌, ಸ್ನೇಹಲ್‌ ಜಾಯಿ, ಶರಣು ನಾಟೇಕಾರ, ನಿಂಗಪ್ಪ ಕನಗನಹಳ್ಳಿ, ಶರಣು ಧನ್ನೇಕರ್‌, ಮೋಹನ ಹಳ್ಳಿ, ಪ್ರವೀಣ ರಾಜನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next