Advertisement

ಅಂಬರೀಶ್‌ ಸ್ಪರ್ಧೆ: ಮುಗಿಯದ ಗೊಂದಲ

06:00 AM Apr 22, 2018 | Team Udayavani |

ಬೆಂಗಳೂರು: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅಂಬರೀಶ್‌ಗೆ ಟಿಕೆಟ್‌ ನೀಡಿದ್ದರೂ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದು, ಈ ಕುರಿತು ಅಂಬರೀಶ್‌ ಆಪ್ತ ಅಮರಾವತಿ ಚಂದ್ರಶೇಖರ್‌ ಶನಿವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ‌ ಚರ್ಚೆ ನಡೆಸಿದರು.

Advertisement

ಆದರೆ ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ರವಿ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸದಲ್ಲಿ ಇರಲಿದ್ದು, ಅಲ್ಲಿಯೇ ಅಂಬರೀಶ್‌ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅನಂತರವೇ ಮಂಡ್ಯದಲ್ಲಿ ಅಂಬರೀಶ್‌ ಸ್ಪರ್ಧೆ ಮಾಡುತ್ತಾರೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಲಿದೆ. ಆರೋಗ್ಯ ಸರಿಯಾಗಿಲ್ಲ ಎಂದು ತನಗೆ ಯಾವುದೇ ಮಾಹಿತಿ ನೀಡದೆ ಸಂಪುಟದಿಂದ ಕೈಬಿಟ್ಟಿದ್ದು ಅಂಬರೀಶ್‌ ಮುನಿಸಿಗೆ ಕಾರಣವಾಗಿದೆ.  ಈಗ ಸ್ಪರ್ಧಿಸುವಂತೆ ಒತ್ತಡ ಹೇರು ತ್ತಿರುವುದೇಕೆ ಎಂದು ಅಂಬರೀಶ್‌ ತನ್ನ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ನಡುವೆ ಅಂಬರೀಶ್‌ ಜೆಡಿಎಸ್‌ಗೆ ಹೋಗುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಆ ರೀತಿಯ ಯಾವುದೇ ಬೆಳವಣಿಗೆಯಾಗಿಲ್ಲ ಎಂದು ಅಂಬರೀಶ್‌ ಆಪ್ತ ಅಮರಾವತಿ ಚಂದ್ರಶೇಖರ್‌ ಸ್ಪಷ್ಟಪಡಿಸಿದ್ದಾರೆ.  ಒಂದು ವೇಳೆ ಅಂಬರೀಶ್‌ ಸ್ಪರ್ಧಿಸದಿದ್ದಲ್ಲಿ ಮಾಜಿ ಶಾಸಕ ಎಚ್‌.ಬಿ. ರಾಮು ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.  ಇದರೊಂದಿಗೆ ಮಾಜಿ ಸಚಿವ ಆತ್ಮಾನಂದ ಅವರೂ ಮಂಡ್ಯ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next