Advertisement

ದೊಡ್ಡರಸಿನಕೆರೆಯಲ್ಲಿ ಅಂಬರೀಶ್‌ ಪುಣ್ಯಸ್ಮರಣೆ

02:31 PM Nov 25, 2021 | Team Udayavani |

ಭಾರತೀನಗರ: ಇಲ್ಲಿಗೆ ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ ಮಾಜಿ ಸಚಿವ, ನಟ ದಿ.ಅಂಬರೀಶ್‌ ಅವರ 3ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು. ಗ್ರಾಮದ ಹೆಬ್ಟಾಗಿಲ ಬಳಿ ಕೆರೆಯ ದಡದಲ್ಲಿ ಅಂಬರೀಶ್‌ರ ಚಿತಾಭಸ್ಮವನ್ನಿಟ್ಟು ನಿರ್ಮಿಸಲಾಗಿರುವ ಸಮಾಧಿಯನ್ನು ತಳಿರು ತೋರಣ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.

Advertisement

ಸಮಾಧಿ ಮೇಲೆ ವಿವಿಧ ಬಗೆಯ ಹಣ್ಣು, ತಿಂಡಿ ತಿನಿಸು, ಇಸ್ಪೀಟು, ಎಣ್ಣೆ ಇಡಲಾಗಿತ್ತು. ಬುಧವಾರ ಸಂಜೆ 4 ಗಂಟೆ ಹೊತ್ತಿಗೆ ಗ್ರಾಮಕ್ಕೆ ಸಂಸದೆ ಸುಮಲತಾ, ಪುತ್ರ ಅಭಿಷೇಕ್‌ಗೌಡ, ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರು ಆಗಮಿಸಿ ಸಮಾಧಿಗೆ ಗಂಧದಕಡ್ಡಿ, ಕರ್ಪೂರದಾರತಿ ಬೆಳಗಿಸಿ ಪೂಜೆ ಸಲ್ಲಿಸಿದರು.

ಇದನ್ನೂ ಓದಿ;- ಜನತಾ ಪ್ರಜಾಪ್ರಭುತ್ವ ಸ್ಥಾಪನೆಯಾಗಲಿ

ಅಲ್ಲಿಂದ ಗ್ರಾಮದ ಮಧ್ಯಭಾಗದಲ್ಲಿ ನಿರ್ಮಿಸಲಾಗಿರುವ ಅಂಬರೀಶ್‌ ಪುತ್ಥಳಿ ಬಳಿ ತೆರಳಿದ ಎಲ್ಲರೂ ಪುತ್ಥಳಿಗೆ ಹೂವಿನ ಹಾರ ಹಾಕಿ ನೆನೆದು ನಮಸ್ಕರಿಸಿದರು. ಗ್ರಾಮದಲ್ಲಿ ನೆರೆದಿದ್ದ ಅಂಬರೀಶ್‌ ಅಭಿಮಾನಿಗಳು ರೆಬಲ್‌ಸ್ಟಾರ್‌ ಅಂಬರೀಶ್‌ ಗೆ ಜಯವಾಗಲಿ, ಮತ್ತೆ ಅಂಬಿ ಹುಟ್ಟಿಬರಲಿ ಎಂದು ಜೈಕಾರ ಹಾಕಿದರು.

ಗ್ರಾಮದಲ್ಲಿ ಅಭಿಮಾನಿಗಳು ಗ್ರಾಮಸ್ಥರಿಗೆ ಬಿರಿಯಾನಿ ಊಟ ಹಾಕಿ ಪುಣ್ಯಸ್ಮರಣೆ ಆಚರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ಗೂಳಿಗೌಡ, ಜಿ.ಪಂ ಮಾಜಿ ಸದಸ್ಯ ಎ.ಎಸ್‌. ರಾಜೀವ್‌, ಸತ್ಯಾನಂದ, ಪಾಂಡವಪುರದ ಸುಬ್ಬಣ್ಣ, ಬೇಲೂರು ಸೋಮಶೇಖರ್‌, ಶಶಿ, ಡೇರಿ ಶಿವ, ಸಿದ್ದೇಗೌಡ, ಮಹೇಶ್‌, ಕುಮಾರ, ಕೇಬಲ್‌ ಮಧು, ಪ್ರಸನ್ನ, ಅಮರ್‌, ಸುನೀಲ್‌, ರವಿ, ಕೃಷ್ಣ, ಸಂದೀಪ, ರಮೇಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next