Advertisement

Alwar murder: ನಾಲ್ವರು ಅಪರಾಧಿಗಳಿಗೆ ಜೈಲು

09:40 PM May 25, 2023 | Team Udayavani |

ಜೈಪುರ: 2018ರಲ್ಲಿ ರಾಜಸ್ಥಾನದ ಆಲ್ವಾರ್‌ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ಆರೋಪದಲ್ಲಿ ರಕ್ಬರ್‌ ಖಾನ್‌ ಎಂಬುವವರನ್ನು ಸಾಯುವವರೆಗೂ ಹೊಡೆದ ಆರೋಪದಲ್ಲಿ ನಾಲ್ವರು ಅಪರಾಧಿಗಳಿಗೆ ಜೈಪುರ ನ್ಯಾಯಾಲಯವು ತಲಾ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಸಾಕ್ಷ್ಯಗಳ ಕೊರತೆಯಿಂದ ಈ ಪ್ರಕರಣದ ಐದನೇ ಆರೋಪಿಯನ್ನು ಖುಲಾಸೆಗೊಳಿಸಿದೆ. ಪರಮಜಿತ್‌ ಸಿಂಗ್‌, ಧರ್ಮೇಂದ್ರ ಯಾದವ್‌, ನರೇಶ್‌ ಶರ್ಮ ಮತ್ತು ವಿಜಯ್‌ ಕುಮಾರ್‌ ಶಿಕ್ಷೆಗೆ ಗುರಿಯಾದವರು.

Advertisement

ನವಲ್‌ ಕಿಶೋರ್‌ ಎಂಬಾತನನ್ನು ದೋಷಮುಕ್ತಗೊಳಿಸಲಾಗಿದೆ. 2018ರ ಜು.20ರಂದು ಆಲ್ವಾರ್‌ ಜಿಲ್ಲೆಯ ಲಡಪುರ ಗ್ರಾಮದಿಂದ ಗೋವುಗಳನ್ನು ಖರೀದಿಸಿದ್ದ ರಕ್ಬರ್‌ ಖಾನ್‌ ಮತ್ತು ಅಸ್ಲಾಂ ಹರಿಯಾಣದ ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಅಕ್ರಮ ಗೋಸಾಗಾಟದ ಶಂಕೆಯಿಂದ ರಾಮಗಢ ಪೊಲೀಸ್‌ ಠಾಣೆ ವ್ಯಾಪ್ತಿಯ ಲಾಲವಂಡಿ ಗ್ರಾಮದಲ್ಲಿ ಒಂದು ಗುಂಪು ಇವರ ಮೇಲೆ ಎರಗಿತು. ಅಸ್ಲಾಂ ಜನರಿಂದ ತಪ್ಪಿಸಿಕೊಂಡು ಪರಾರಿಯಾದ. ಆದರೆ ರಕºರ್‌ ಖಾನ್‌ನನ್ನು ತೀವ್ರವಾಗಿ ಥಳಿಸಲಾಯಿತು. ಆಸ್ಪತ್ರೆಗೆ ದಾಖಲಾದ ಆತ, ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟ. 2019ರಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next