Advertisement
ಹೌದು, ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮವೇ ಆಲೂರು ವೆಂಕಟರಾಯರ ಹುಟ್ಟೂರು. ಆದರೆ ಕೆಲ ಪುಸ್ತಕ ಮತ್ತು ಅಂತರ್ಜಾಲದಲ್ಲಿ ಜನ್ಮಸ್ಥಳ ವಿಜಯಪುರ (ಅಜ್ಜಿಯ ಊರು) ವೆಂದು ತಪ್ಪು ದಾಖಲಾಗಿದ್ದರಿಂದ ಈಗಲೂ ಬಹಳಷ್ಟು ಜನರಿಗೆ ಸತ್ಯಾಂಶ ಗೊತ್ತಿಲ್ಲ. ಇನ್ನು ಅಖಂಡ ಧಾರವಾಡದ ಆಲೂರು (ಈಗಿನ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು) ಇವರ ಪೂರ್ವಿಕರಿಗೆ ಜಾಗೀರಾಗಿ ದೊರೆತ ಊರು. ಅಂದಿನಿಂದ ಇವರದ್ದು ಆಲೂರು ಮನೆತನವಾಯಿತು ಎಂದು ಹೇಳಲಾಗುತ್ತಿದೆ.
Related Articles
Advertisement
‘ಕನ್ನಡ ಕುಲ ಪುರೋಹಿತರು’ ಬಿರುದುಆಲೂರು ವೆಂಕಟರಾಯರು 1880 ಜುಲೈ 12ರಂದು ಜನಿಸಿದರು. ತಂದೆ ಭೀಮರಾಯರು, ತಾಯಿ ಭಾಗೀರಥೀಯರು. ಬಾಲ್ಯವನ್ನು ಹೊಳೆ ಆಲೂರಿನಲ್ಲಿ ಕಳೆದ ನಂತರ ಸಮೀಪದ ನವಲಗುಂದದಲ್ಲಿ ಪ್ರಾಥಮಿಕ ಶಿಕ್ಷಣ ಆರಂಭಿಸಿದರು. 1903ರಲ್ಲಿ ಪುಣೆಯಲ್ಲಿ ಬಿ.ಎ ಪದವಿ ಪಡೆಯುವಾಗಲೇ ಕನ್ನಡದ ಅಭಿಮಾನ ಬೆಳೆಸಿಕೊಂಡರು. ಧಾರವಾಡದಲ್ಲಿ ವಕೀಲರಾಗಿದ್ದುಕೊಂಡು ಕನ್ನಡ ನಾಡಿದ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡಿದರು. ಇವರು ಬರೆದ ಕರ್ನಾಟಕ ಗತವೈಭವ ಕನ್ನಡಿಗರ ಭವ್ಯ ಪರಂಪರೆಯನ್ನು ಜನರಿಗೆ ಪರಿಚಯಿಸಿ ಕೊಟ್ಟಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಮುಕಿ ಅವಿಶ್ರಾಂತ ಶ್ರಮಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸಕ್ರಿಯ ಸದಸ್ಯರಾಗಿ ಕರ್ನಾಟಕದ ಏಕೀಕರಣಕ್ಕಾಗಿ ಮಹತ್ತರ ಸೇವೆ ಸಲ್ಲಿಸಿದರು. ಇವರ ಅವಿರತ ಶ್ರಮದಿಂದಾಗಿ ಕರ್ನಾಟಕ ಏಕೀಕೃತಗೊಳ್ಳಲು ಸಾಧ್ಯವಾಯಿತು. ಅವರ ಇಡೀ ಜೀವನವೇ ಕನ್ನಡ ನಾಡು-ನುಡಿಗಾಗಿ ಅರ್ಪಣೆಯಾಗಿದ್ದಿತು. ಅವರ ಸೇವೆಯನ್ನು ಗುರುತಿಸಿದ ಕನ್ನಡ ಜನತೆ ಅವರಿಗೆ ಕನ್ನಡ ಕುಲ ಪುರೋಹಿತ ಎಂಬ ಬಿರುದು ನೀಡಿ ಗೌರವಿಸಿದರು. ಅಜ್ಜನ ತಂದೆ ಭೀಮರಾಯರು ಆಲೂರಿನಲ್ಲಿ ಜಹಗೀರಿಯನ್ನು ಬ್ರಿಟಿಷರಿಂದ ಪಡೆದಿದ್ದರು. ಹೀಗಾಗಿ ವೆಂಕಟರಾಯರ ತಾಯಿಯ ತವರು ಮನೆ ವಿಜಯಪುರದಲ್ಲಿ ಜನಿಸಿದರೂ ಹೊಳೆ ಆಲೂರಿನಲ್ಲಿಯೇ ತಮ್ಮ ಬಾಲ್ಯವನ್ನು ಕಳೆದರು. ಅದರಿಂದಲೇ ನಮ್ಮ ಅಜ್ಜನವರಿಗೆ ಆಲೂರು ವೆಂಕಟರಾಯರು ಅಂತ ಹೆಸರು ಬಂತು. ಸ್ಥಳೀಯ ಶಾಸಕರು ಮತ್ತು ಕೆಲವರಿಂದ ಹೊಳೆ ಆಲೂರಿನಲ್ಲಿ ಸ್ಮಾರಕ ಭವನ ನಿರ್ಮಿಸಲಾಗಿದೆ. ಇನ್ನಾದರೂ ಸರ್ಕಾರ ಅದರ ಸದ್ಬಳಕೆಗೆ ಮುಂದಾಗಬೇಕು. ವೆಂಕಟರಾಯರ ಹುಟ್ಟೂರು ಆಲೂರು ಆದರೂ ಅವರ ಕಾರ್ಯಕ್ಷೇತ್ರ ಧಾರವಾಡ. ನಮ್ಮ ಅಜ್ಜಿ ಊರು ವಿಜಯಪುರದಲ್ಲಿ ವೆಂಕಟರಾಯರು ಜನಿಸಿದ್ದು. ಹೀಗಾಗಿ ಕೆಲ ಪುಸ್ತಕದಲ್ಲಿ ವಿಜಯಪುರವೆಂದು ದಾಖಲಾಗಿದೆ.
ದೀಪಕ ಆಲೂರು,
ವೆಂಕಟರಾಯರ ಮೊಮ್ಮಗ, ಧಾರವಾಡ ಕನ್ನಡ ನಾಡು-ನುಡಿಗೆ ಆಲೂರು ವೆಂಕಟರಾಯರ ಸೇವೆ ಸ್ಮರಣೀಯ. ಅಂಥ ಮಹನೀಯರು ನಮ್ಮ ಊರಿನಲ್ಲಿ ಜನಿಸಿರುವುದು ಹೆಮ್ಮೆಯ ವಿಷಯ. ಅವರ ಕನ್ನಡ ಕೈಂಕರ್ಯವನ್ನು ಯುವಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಅವರ ಮನೆಯನ್ನು ಸ್ಮಾರಕವನ್ನಾಗಿ ನಿರ್ಮಿಸುವುದರ ಜೊತೆಗೆ ವರ್ಷಕ್ಕೊಮ್ಮೆ ಗ್ರಾಮದಲ್ಲಿ ಆಲೂರರ ಜಯಂತಿ, ಪುಣ್ಯಸ್ಮರಣೆ ಆಚರಿಸುವ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು.
ಶಿವಾನಂದ ಕೆಲೂರು ಹೊಳೆ ಆಲೂರು ಗ್ರಾಮಸ್ಥ ಶರಣು ಹುಬ್ಬಳ್ಳಿ