Advertisement

ಆಲೂರು ಸಿದ್ದಾಪುರ ಗ್ರಾ.ಪಂ.ಕಚೇರಿ: ಪರಿಸರ ದಿನಾಚರಣೆ

10:40 PM Jun 13, 2019 | Team Udayavani |

ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಗ್ರಾ.ಪಂ. ಕರ್ನಾಟಕ ಭೂ ಹಕ್ಕುದಾರರ ಜಿಲ್ಲಾ ವೇದಿಕೆ, ಆಲೂರು ಸಿದ್ದಾಪುರ ಸರಕಾರಿ ಪ.ಪೂ.ಕಾಲೇಜು ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಸೇರಿದ ಜಾಗದಲ್ಲಿ ಮತ್ತು ಮುಖ್ಯರಸ್ತೆ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Advertisement

ಶನಿವಾರಸಂತೆ ಅರಣ್ಯ ಇಲಾಖೆಯಿಂದ ವಿತರಿಸಿದ ವಿವಿಧ ಸಸಿಗಳನ್ನು ಅರಣ್ಯ ಇಲಾಖೆ ಸಿಬಂದಿ ಗ್ರಾ.ಪಂ.ಗೆ ವಿತರಿಸಿತು. ಸರಕಾರಿ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ಗಿಡಗಳನ್ನು ನಾಟಿ ಮಾಡಿದರು. ನಂತರ ವಿಶ್ವ ಪರಿಸರ ದಿನದ ಅಂಗವಾಗಿ ವಿದ್ಯಾರ್ಥಿಗಳು ಗ್ರಾಮದ ಮುಖ್ಯರಸ್ತೆ ಮೂಲಕ ಪರಿಸರ ಉಳಿಸುವಂತೆ ಮೆರವಣಿಗೆಯಲ್ಲಿ ಸಾಗಿದರು.

ಕರ್ನಾಟಕ ಭೂಹಕ್ಕುದಾರರ ವೇದಿಕೆ ರಾಜ್ಯ ಸಂಚಾಲಕ ರಾಜಶೇಖರ್‌ ನಾಯ್ಡು, ಮಹಿಳಾ ಸಂಚಾಲಕಿ ಚಿತ್ರಾವತಿ, ಆಲೂರುಸಿದ್ದಾಪುರ ಗ್ರಾ.ಪಂ.ಅಧ್ಯಕ್ಷೆ ವೀಣರಮೇಶ್‌, ಪಿಡಿಒ ಪೂರ್ಣಿಮಾ, ಉಪನ್ಯಾಸಕ ಶಿವಕುಮಾರ್‌, ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next