Advertisement

ಕನ್ನಡ ಸೇವೆಗೆ ಅವಕಾಶ ಮಾಡಿಕೊಡಿ; ಸಂಗಮೇಶ

06:08 PM Nov 05, 2021 | Team Udayavani |

ಲೋಕಾಪುರ: ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ| ಶೇಖರಗೌಡ ಮಾಲಿಪಾಟೀಲ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಿವಾನಂದ ಶೆಲ್ಲಿಕೇರಿ ಅವರನ್ನು ಬೆಂಬಲಿಸಬೇಕೆಂದು ಕಸಾಪ ತಾಲೂಕಾಧ್ಯಕ್ಷ ಸಂಗಮೇಶ ನೀಲಗುಂದ ಮನವಿ ಮಾಡಿದರು.

Advertisement

ಪಟ್ಟಣದ ರಾಯಲ್‌ ಪ್ಯಾಲೇಸ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಕಸಾಪ ಅಭ್ಯರ್ಥಿಗಳ ಪರ ವåತಯಾಚಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಕನ್ನಡಾಭಿಮಾನಿಗಳು, ಕಲಾವಿದರು, ಸಾಹಿತಿಗಳು ಆಶೀರ್ವದಿಸಿ ಕನ್ನಡ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.

ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ| ಶೇಖರಗೌಡ ಮಾಲಿಪಾಟೀಲ ಮಾತನಾಡಿ, ಶತಮಾನದ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಕನ್ನಡ ವಿಶ್ವ ಕನ್ನಡ ಭಾಷೆಯಾಗಬೇಕು. ಸಮಸ್ತ ಕನ್ನಡಿಗರ ಆಶಯ ನನಸಾಗಿಸಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ನನಗೆ ಮತ ನೀಡಬೇಕು ಎಂದು ವಿನಂತಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಜಿಲ್ಲಾ ಕಸಾಪ ಅಧ್ಯಕ್ಷನಾಗಿ ಇನ್ನಷ್ಟು ಹೆಚ್ಚಿನ ಕಾರ್ಯಗಳನ್ನು ಮಾಡಬೇಕೆಂಬ ಹಂಬಲ ನನ್ನದಾಗಿದೆ. ಎಲ್ಲರೂ ಆಶೀರ್ವದಿಸಬೇಕು ಎಂದು ವಿನಂತಿಸಿದರು. ರಾಯಲ್‌ ಪ್ಯಾಲೇಸ್‌ ಶಾಲೆ ಕೋ ಆರ್ಡಿನೇಟರ್‌ ಭಾರತಿ ಗೌಡನಹಳ್ಳಿ, ಸಂಸ್ಥೆ ಕಾರ್ಯದರ್ಶಿ ಸೋಮಶೇಖರ ಲೋಹಾರ, ಬಿ.ಎನ್‌. ಪರಡ್ಡಿ, ಬಿಆರ್‌ಸಿ ಮಹಾಂತೇಶ ನರಸನಗೌಡರ, ಸುರೇಶ ಪುರವಾರ, ಆನಂದ ಪೂಜಾರಿ, ಮಲ್ಲಿಕಾರ್ಜುನ ಅರಬಿ, ಪ್ರವೀಣ ಗಂಗಣ್ಣವರ, ಸಿದ್ದು ಹೂಗಾರ ಅರುಣ ಚೌಡಕಿ, ಶಂಕರ ರೊಳ್ಳಿ ಹಾಗೂ ಕಸಾಪ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next