Advertisement

ಕೇಜ್ರಿವಾಲರಿಗೆ ಕೆಲಸ ಮಾಡಲು ಬಿಡಿ: ಕೇಂದ್ರಕ್ಕೆ ಶಿವಸೇನೆ ಆಗ್ರಹ

05:39 PM Jul 06, 2018 | Team Udayavani |

ಮುಂಬಯಿ : ಕೇಂದ್ರ ಸರಕಾರ ದಿಲ್ಲಿಯಲ್ಲಿನ ಆಮ್‌ ಆದ್ಮಿ ಪಕ್ಷದ ಸರಕಾರದೊಂದಿಗೆ ಸಹಕರಿಸಬೇಕು ಮತ್ತು  ಸಿಎಂ ಅರವಿಂದ ಕೇಜ್ರಿವಾಲರಿಗೆ ಕೆಲಸ ಮಾಡಲು ಬಿಡಬೇಕು ಎಂದು ಶಿವಸೇನೆ ಹೇಳಿದೆ.

Advertisement

ರಾಷ್ಟ್ರ ರಾಜಧಾನಿ ದಿಲ್ಲಿಯ ರಾಜ್ಯ ಸ್ಥಾನ ಮಾನ ವಿಷಯದಲ್ಲಿ ಕೇಜ್ರಿವಾಲ್‌ ಪರವಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಶಿವಸೇನೆಯಿಂದ ಈ ಹೇಳಿಕೆ ಬಂದಿದೆ.

ಎಲ್‌ ಜಿ ಮತ್ತು ಆಪ್‌ ಸರಕಾರದ ನಡುವಿನ ಹಗ್ಗಜಗ್ಗಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದ್ದರೆ ಎಲ್‌ ಜಿ ಅವರನ್ನು ನಿಯಂತ್ರಿಸಬಹುದಾಗಿತ್ತು. ಆದರೆ ಅವರು ಹಾಗೆ ಮಾಡದಿದ್ದುದು ದುರದೃಷ್ಟಕರ ಎಂದು ಆಪ್‌ ಸ್ನೇಹಿತನಾಗಿರುವ ಶಿವಸೇನೆ ಟೀಕಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next