Advertisement

BJP ಜತೆ ಚಂದ್ರಬಾಬು ನಾಯ್ಡು, ಪವನ್‌ ಕಲ್ಯಾಣ್‌ ಪಕ್ಷಗಳ ಮೈತ್ರಿ

12:45 AM Mar 09, 2024 | Team Udayavani |

ಹೊಸದಿಲ್ಲಿ: ಚುನಾವಣೆಗೆ ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ನಟ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಕ್ಷಗಳು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿವೆ. ಈ ಬಗ್ಗೆ ಟಿಡಿಪಿ ನಾಯಕ ರವೀಂದ್ರ ಕುಮಾರ್‌ ಘೋಷಣೆ ಮಾಡಿದ್ದಾರೆ.

Advertisement

ಕೇಂದ್ರ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ನಾಯ್ಡು ಮಾತುಕತೆ ನಡೆಸಿ ದ್ದಾರೆ ಎಂದು ಅವರು ಹೇಳಿದ್ದಾರೆ. ಈ ಮೂಲಕ 6 ವರ್ಷಗಳ ಬಳಿಕ ಎನ್‌ಡಿಎ ಮೆತ್ರಿಕೂಟಕ್ಕೆ ಟಿಡಿಪಿ ವಾಪಸಾದಂತಾಗಿದೆ.

ಸೀಟು ಹಂಚಿಕೆ: ಬಿಜೆಪಿ, ಬಿಜೆಡಿ ನಡುವೆ ಬಿಕ್ಕಟ್ಟು?
ಭುವನೇಶ್ವರ: ಬಿಜೆಪಿ- ಬಿಜೆಡಿ ನಡುವೆ ಸ್ಥಾನ ಹೊಂದಾಣಿಕೆ ಬಗ್ಗೆ ಬಿಕ್ಕಟ್ಟು ಉಂಟಾಗಿದೆ. ಒಡಿಶಾ ವಿಧಾನಸಭೆಯ 147 ಸ್ಥಾನಗಳಲ್ಲಿ 100 ಸ್ಥಾನಗಳನ್ನು ಬಿಜೆಡಿ ಕೇಳುತ್ತಿದೆ. ಆದರೆ ಬಿಜೆಪಿ ನಾಯಕರು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಲೋಕಸಭೆ 21 ಕ್ಷೇತ್ರಗಳಲ್ಲಿ 14 ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಕೇಳಿದ್ದು, ಇದಕ್ಕೆ ಬಿಜೆಡಿ ಒಪ್ಪಿ  ಕೊಳ್ಳುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next