Advertisement

Lok Sabha Election: ಏ.17ರಂದು ರಾಯಚೂರಿಗೆ ತೆಲುಗು ನಟ ಪವನ್ ಕಲ್ಯಾಣ್

04:52 PM Apr 11, 2024 | Team Udayavani |

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತೆಲುಗಿನ ಖ್ಯಾತ ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ ಏ.17ರಂದು ರಾಯಚೂರಿಗೆ ಬರಲಿದ್ದಾರೆ.

Advertisement

ಅಂದು ಬೆಳಗ್ಗೆ 11 ಗಂಟೆಯಿಂದ ನಗರದ ಗಂಜ್ ವೃತ್ತದಲ್ಲಿ ರೋಡ್ ಶೋಗೆ ಚಾಲನೆ ನೀಡುತ್ತಿದ್ದು, ಆರ್ ಟಿಒ ವೃತ್ತದವರೆಗೂ ರೋಡ್ ಶೋ ನಡೆಯಲಿದೆ. ಯರಮರಸ್ ಸರ್ಕ್ಯುಟ್ ಹೌಸ್ ಬಳಿಯ ಹೆಲಿಪಾಡ್ ಬಂದಿಳಿಯುವ ಅವರು, ಕಾರಿನಲ್ಲಿ ಗಂಜ್ ವರೆಗೆ ಆಗಮಿಸುವರು. ಬಳಿಕ ರೋಡ್ ಶೋನಲ್ಲಿ ಪಾಲ್ಗೊಳ್ಳುವರು.

2014ರಲ್ಲಿಯೂ ಪವನ್ ಕಲ್ಯಾಣ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ನಗರಕ್ಕೆ ಆಗಮಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಅವರು ಬರಲಿಲ್ಲ. ಇದರಿಂದ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿತ್ತು.

ರಾಯಚೂರು ಆಂಧ್ರ, ತೆಲಂಗಾಣಕ್ಕೆ ಹೊಂದಿರುವ ಜಿಲ್ಲೆಯಾಗಿದ್ದು, ಈ ಭಾಗದಲ್ಲಿ ಪವನ್ ಕಲ್ಯಾಣ ಅಭಿಮಾನಿಗಳು ಸಾಕಷ್ಟಿದ್ದು, ನೆಚ್ಚಿನ ನಟ ಬರುವ ಸಂಗತಿ ಅವರಿಗೆ ಖುಷಿ ಕೊಟ್ಟಿದೆ.

ಇದನ್ನೂ ಓದಿ: ರಾಜಕೀಯದಾಗ ಜೋಡೆತ್ತಿನ ನಾಕ ಸರ್ತಿಗಾಡಿ ನಿಂತಾವ”: ಬೆಂಕಿ ಭವಿಷ್ಯ ನುಡಿರುವ ಶಿವಯ್ಯಮುತ್ಯಾ

Advertisement
Advertisement

Udayavani is now on Telegram. Click here to join our channel and stay updated with the latest news.

Next