Advertisement

ರಾಜ್ಯದಲ್ಲಿ ಮೈತ್ರಿ ಅಸಾಧ್ಯ: ಸಿಎಂ

06:30 AM Jan 06, 2018 | |

ಹಾಸನ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹಾ ಮೈತ್ರಿ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಕೋಮುಶಕ್ತಿಗಳ ವಿರುದ್ಧ ಹೋರಾಡಲು ಜಾತ್ಯತೀತ ಶಕ್ತಿಗಳು ಒಂದಾಗಲಿವೆ. ರಾಜ್ಯದಲ್ಲಿ ಸಮರ್ಥವಾಗಿ ಹೋರಾಡಲು ಕಾಂಗ್ರೆಸ್‌ ಶಕ್ತವಾಗಿದೆ ಎಂದರು.

ಬಿಎಸ್‌ವೈ ಬೇಜವಾಬ್ದಾರಿ: ದೀಪಕ್‌ರಾವ್‌ ಹತ್ಯೆಯಲ್ಲಿ ಸಚಿವ ರಮಾನಾಥ ರೈ ಕೈವಾಡವಿದೆ ಎಂಬ ಯಡಿಯೂರಪ್ಪ ಆರೋಪ ಬೇಜವಾಬ್ದಾರಿತನದ್ದು. ದೀಪಕ್‌ ಹತ್ಯೆ ಪ್ರಕರಣದಲ್ಲಿ ಆರೋಪಿ ಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಪಿಎಫ್ಐ, ಕೆಎಫ್ಡಿ ಮೊದಲಾದ ಸಂಘಟನೆ ಗಳನ್ನು ನಿಷೇಧ ಮಾಡುವ ಬಗ್ಗೆ ತನಿಖೆ ಮುಗಿದ ಬಳಿಕ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next