Advertisement

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅಗ್ರಹ

02:15 PM Jun 15, 2019 | Suhan S |

ಸಂಕೇಶ್ವರ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಇಲ್ಲಿಯ ಭಾರತೀಯ ವೈದ್ಯರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಉಪ-ತಹಶೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.

Advertisement

ಕೋಲ್ಕತ್ತಾದಲ್ಲಿ ಕಾರ್ಯನಿರತ ವೈದ್ಯ ಡಾ| ಪರಿಭಾ ಮುಖರ್ಜಿ ಅವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ಇಂಥ ಹಲ್ಲೆಗಳು ದೇಶಾದ್ಯಂತ ಮೇಲಿಂದ ಮೇಲೆ ನಡೆಯುತಿದ್ದು, ವೈದ್ಯಕೀಯ ವಲಯದಲ್ಲಿ ಭೀತಿ ಮೂಡಿಸಿದೆ. ಶೀಘ್ರವೇ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವೈದ್ಯರಾದ ಡಾ| ಜೇಕಬ ಸಂದರವಾಲೆ, ಡಾ| ನಂದಕುಮಾರ ಹಾವಳ, ಡಾ| ಶಿವಾನಂದ ಮುರಗುಡೆ, ಡಾ| ರಮೇಶ ದೊಡಭಂಗಿ, ಡಾ| ಸಚಿನ ಪಾಟೀಲ, ಡಾ| ವಿಕಾಸ ಪಾಟೀಲ, ಡಾ| ಸಚಿನ ಮುರಗುಡೆ, ಡಾ| ಓಂಕಾರ, ಡಾ| ಸುರೇಖಾ ಹಾವಳ, ಡಾ| ಶ್ವೇತಾ ಮುರಗುಡೆ, ಡಾ| ಕೋರೆ, ಮಂದಾರ ಹಾವಳ ಸೇರಿದಂತೆ ಅನೇಕ ವೈದ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next