Advertisement

Kapu ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

12:54 AM Jan 28, 2024 | Team Udayavani |

ಕಾಪು: ಅನಿವಾಸಿ ಭಾರತೀಯ ಪತಿ ಶಿವದಯ ಮತ್ತು ಆತನ ಆತನ ತಂದೆ ದಯಾಶಂಕರ್‌ ಮತ್ತು ಅವರ ಪತ್ನಿ ಸುಜಾತಾ ಮಾನಸಿಕ ಹಿಂಸೆ ನೀಡಿ ವರದಕ್ಷಿಣೆಗೆ ಬೇಡಿಕೆಯಿಟ್ಟು ಬೆದರಿಕೆ ಹಾಕಿರುವ ಬಗ್ಗೆ ಮಜೂರು ನಿವಾಸಿ ಸ್ಮಿತಾ ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಶಿವದಯ 2021ರ ಸೆ. 8ರಂದು ಮಜೂರಿನ ಸ್ಮಿತಾರನ್ನು ಉಡುಪಿಯಲ್ಲಿ ವಿವಾಹವಾಗಿದ್ದರು. ಈ ಸಂದರ್ಭ 20 ಲಕ್ಷ ರೂ. ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಕುರ್ಲಾದ ಮನೆ ಮತ್ತು ಲಂಡನ್‌ನಲ್ಲಿಯೂ ಗಂಡ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದರು. ಆ ಬಳಿಕ ಭಾರತಕ್ಕೆ ಬಂದಿದ್ದ ಸ್ಮಿತಾ, ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ಗಂಡನ ವಿರುದ್ಧ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದ ನಿರ್ದೇಶನದಂತೆ ಮಧ್ಯಸ್ಥಿಕೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಜ. 23ರಂದು ಮಧ್ಯಸ್ಥಿಕೆ ಮುಗಿದ ಬಳಿಕಸ್ಮಿತಾ ಮನೆಗೆ ಹೋಗುವ ವೇಳೆ ಗಂಡ ಹಾಗೂ ಮಾವ ದಯಾಶಂಕರ್‌ ಅವಾಚ್ಯ ಶಬ್ದಗಳಿಂದ ನಿಂದಿಸಿ ವರದಕ್ಷಿಣೆಗೆ ಬೇಡಿಗೆ ಇಟ್ಟು ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next