Advertisement

BJP vs Cong; ಸದ್ಯ ಅಧಿಕಾರದಲ್ಲಿದ್ದವರ ಗಂಡಸ್ತನ ಪರೀಕ್ಷೆಯಾಗಬೇಕಿದೆ: ಬೊಮ್ಮಾಯಿ ಕಿಡಿ

10:23 PM Apr 04, 2024 | Team Udayavani |

ಹಾನಗಲ್ : ‘ಸದ್ಯ ಯಾರು ಅಧಿಕಾರದಲ್ಲಿದ್ದಾರೋ ಅವರ ಗಂಡಸ್ತನ ಪರೀಕ್ಷೆಯಾಗುವುದು’ ಎಂದು ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

Advertisement

ಹಾನಗಲ್ಲ ತಾಲೂಕಿನ ಆಡೂರ ಗ್ರಾಮದಲ್ಲಿ ಮಾತನಾಡಿ, ‘ಕರ್ನಾಟಕದ ಜನತೆ ಸಿದ್ದರಾಮಯ್ಯ ಅವರನ್ನ‌ ಅಧಿಕಾರಕ್ಕೆ ತಂದಿದ್ದಾರೆ.ಅಧಿಕಾರಕ್ಕೆ ತಂದ ಮಾಲಕರು ಕಷ್ಟದಲ್ಲಿದ್ದಾರೆ, ಅವರ ಕಷ್ಟಕ್ಕೆ ಧಾವಿಸುವುದು ಅವರ ಕೆಲಸ. ನಮ್ಮ ಗಂಡಸ್ತನ ನಾವು ಆವಾಗಲೇ ತೋರಿಸಿದ್ದೇವೆ. ಪ್ರವಾಹ ಬಂದಾಗ ನಾವು ಯಾರಿಗೂ ಕಾಯದೆ ಪರಿಹಾರವನ್ನ ಎರಡು ಪಟ್ಟು ಬಿಡುಗಡೆ ಮಾಡಿದ್ದೇವೆ. ಒಂದೇ ತಿಂಗಳಲ್ಲಿ 17 ಲಕ್ಷ ಜನರಿಗೆ ಪರಿಹಾರ ಕೊಟ್ಟ ಗಂಡಸ್ತನ ನಮ್ಮದ್ದಿದೆ’ ಎಂದರು.

‘ನಾವು ಯಾರಿಗೂ ಬೊಟ್ಟು ಮಾಡಿ ತೋರಿಸಲಿಲ್ಲ, ನಿಜವಾದ ಗಂಡಸ್ತನ ಪರೀಕ್ಷೆ ಇವರದ್ದಾಗಬೇಕಿದೆ. ಮೇಲೆ ಬೊಟ್ಟು ಮಾಡಿ ತೋರಿಸದೇ ತಮ್ಮ‌ ಖಜಾನೆಯಿಂದ ದುಡ್ಡು ಬಿಡುಗಡೆ ಮಾಡಿ ತೋರಿಸಲಿ. ರೈತರಿಗೆ ಪರಿಹಾರ ಕೊಡಲು ಇವರ ಖಜಾನೆ ಖಾಲಿಯಾಗಿದೆ. ಕುಂಟು ನೆಪ ಹೇಳುತ್ತಿದ್ದಾರೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಗಂಡಸ್ತನದ ಬಗ್ಗೆ ಮಾತನಾಡುತ್ತಾರೆ’ ಎಂದು ಕಿಡಿ ಕಾರಿದರು.

‘ರಾಮನ ಹೆಸರು ಹೇಳುತ್ತೇವೆ, ರಾಮರಾಜ್ಯವನ್ನು ಮಾಡಿದ್ದೇವೆ. ರಾಜ್ಯದಲ್ಲಿ ಬರುತ್ತಿರುವ ಅಕ್ಕಿ ಮೋದಿ ಕೊಟ್ಟಿರುವುದು, ಬಿಡಿಕಾಳನ್ನ ಸಿದ್ದರಾಮಯ್ಯ ಕೊಟ್ಟಿಲ್ಲ ಇವರಿಗೆ ಯಾವ ನೈತಿಕತೆ ಇದೆ’ ಎಂದುಆಕ್ರೋಶ ಹೊರ ಹಾಕಿದರು.

‘ಎಸ್ ಡಿಪಿಐ ಕಾಂಗ್ರೆಸ್ ಹುಟ್ಟು ಹಾಕಿರುವ ಮರಿ. ಕಾಂಗ್ರೆಸ್ ನವರು ಅದರ ಪಾಲನೆ ಪೋಷಣೆ ಮಾಡಿದ್ದಾರೆ. ಹಾಗಾಗಿ ಅವರು ಅವರ ಜತೆ ಇದ್ದಾರೆ’ ಎಂದು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next