Advertisement

ಜಿಲ್ಲಾದ್ಯಂತ ಕಾರ ಹುಣ್ಣಿಮೆ ಸಂಭ್ರಮ…

04:57 PM Jun 29, 2018 | |

ಬಾಗಲಕೋಟೆ: ಕಾರ ಹುಣ್ಣಿಮೆ ನಿಮಿತ್ತ ಗುರುವಾರ ಸಂಜೆ ನಡೆದ ಕರಿ ಹರಿಯುವ ವೇಳೆ ಬಿಳಿ ಎತ್ತು ಮುಂದೆ ಓಡಿದ್ದು, ಇದರಿಂದ ಬಿಳಿ ಜೋಳ ಸಮೃದ್ಧವಾಗಿ ಬೆಳೆಯಲಿದೆ ಎನ್ನಲಾಗಿದೆ. ನಗರದ ವಲ್ಲಭಬಾಯಿ ವೃತ್ತದಲ್ಲಿ ರೈತರು, ಅಲಂಕರಿಸಿದ ಕರಿ ಮತ್ತು ಬಿಳಿ ಎತ್ತುಗಳನ್ನು ಓಡಿಸಿದರು.

Advertisement

ಈ ವೇಳೆ ಬಿಳಿ ಎತ್ತು ಮುಂದೆ ಓಡಿದ್ದರಿಂದ ಪ್ರಸಕ್ತ ಹಂಗಾಮಿನಲ್ಲಿ ಬಿಳಿಜೋಳ ಸಮೃದ್ಧವಾಗಲಿದೆ ಎಂದು ಭಾವಿಸಿಕೊಂಡರು. ನಗರದ ವೆಂಕಟೇಶ್ವರ ದೇವಸ್ಥಾನದಿಂದ ಕರಿ ಹರಿದಾಗ ಕುಂಬಾರ ಮಡು ಓಣಿಯ ಕರಿಯಪ್ಪ ಯಳ್ಳಿಗುತ್ತಿ ಅವರ ಬಿಳಿ ಬಣ್ಣದ ಎತ್ತು ಮುಂಚೂಣಿಯಲ್ಲಿ ಓಡಿ ಬಿಳಿ ಜೋಳಕ್ಕೆ ಶುಭ ಸಂಕೇತ ಸೂಚಿಸಿದಾಗ, ರೈತ ಸಮೂಹ ಕೇಕೆ ಹಾಕಿ, ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next