Advertisement

ಎಲ್ಲಾ ಲೂಟಿಕೋರರು ಮತ್ತೆ ಒಂದಾಗಿದ್ದಾರೆ:ಸಿದ್ದರಾಮಯ್ಯ ಕಿಡಿ 

04:16 PM Apr 26, 2018 | Team Udayavani |

ಕುಮಟಾ: ‘ಜೈಲಿಗೆ ಹೋಗಿ ಬಂದವರಿಗೆ, ಲೂಟಿಕೋರರಿಗೆ ಮತ್ತೆ ಅಧಿಕಾರ ಕೋಡಬೇಕಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. 

Advertisement

ಕುಮಟಾದಲ್ಲಿ ಎಐಸಿಸಿ  ಅಧ್ಯಕ್ಷ ರಾಹುಲ್‌ ಗಾಂಧಿ ಅವರ  ರೋಡ್‌ ಶೋ ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

‘ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ, ಶ್ರೀರಾಮುಲು, ಯಡಿಯೂರಪ್ಪ ಎಲ್ಲಾ ಲೂಟಿಕೋರರು ಮತ್ತೆ ಒಂದಾಗಿದ್ದಾರೆ ಅವರಿಗೆ ಅಧಿಕಾರ ನೀಡಬೇಕಾ’ ಎಂದು ಪ್ರಶ್ನಿಸಿದರು. ‘

‘ಜೆಡಿಎಸ್‌ಗೆ ಮತ ಹಾಕಬೇಡಿ .ಅವರು ಎಲ್ಲಾ ಕಡೆ ಫಿಕ್ಸಿಂಗ್‌ ಮಾಡಿ ಕೊಂಡಿದ್ದಾರೆ. ಎಲ್ಲಿ ನಮ್ಮನ್ನುಎಳೆದು ಹಾಕಲು ಸಾಧ್ಯವಿದೆ ಅಲ್ಲೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ 25 ಸ್ಥಾನ ಬಂದರೆ ಜಾಸ್ತಿ, ಮತ್ತೆ ಎಂದೂ ಅಧಿಕಾರಕ್ಕೆ ಬರುವುದಿಲ್ಲ’ ಎಂದರು. 

ಈ ಸಲ ಕಪ್‌ ನಮ್ದೆ 

Advertisement

ರೋಡ್‌ಶೋನಲ್ಲಿ ಪಾಲ್ಗೊಂಡಿದ ಕೆಲವರು ಈ ಸಲ ಕಪ್‌ ನಮ್ದೆ ಎಂದರು ಅದಕ್ಕೆ ಸಿಎಂ ಎಸ್‌..ನಮ್ದೆ 
ನಮ್ದೆ.. ಅಂದರು. 

Advertisement

Udayavani is now on Telegram. Click here to join our channel and stay updated with the latest news.

Next