Advertisement

ಬಸವಸಾಗರದ ಎಲ್ಲ ಕ್ರಸ್ಟ್‌ ಗೇಟ್‌ ಬಂದ್‌

03:09 PM Jul 24, 2022 | Team Udayavani |

ನಾರಾಯಣಪುರ: ಬಸವಸಾಗರಕ್ಕೆ ಒಳಹರಿವು ಕಡಿಮೆಯಾಗಿದ್ದರಿಂದ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ ಗಳನ್ನು ಬಂದ್‌ ಮಾಡಿ ಮುರುಡೇಶ್ವರ ಜಲವಿದ್ಯುತ್‌ ಸ್ಥಾವರದ ಮೂಲಕ ಆರು ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಶನಿವಾರ ಬೆಳಗ್ಗೆ ಬಸವಸಾಗರಕ್ಕೆ 45 ಸಾವಿರ ಕ್ಯೂಸೆಕ್‌ನಷ್ಟಿದ್ದ ಒಳಹರಿವು ಮಧ್ಯಾಹ್ನ 1.30ರ ವೇಳೆಗೆ 40 ಸಾವಿರ ಕ್ಯೂಸೆಕ್‌ಗೆ ಇಳಿಕೆಯಾಗಿದ್ದರಿಂದ ಜಲಾಶಯದ ಸಂಗ್ರಹ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಅಣೆಕಟ್ಟಿನ ಎಲ್ಲ ಮುಖ್ಯ ಗೇಟ್‌ ಬಂದ್‌ ಮಾಡಲಾಗಿದೆ ಎಂದು ಅಣೆಕಟ್ಟು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಒಂದೊಮ್ಮೆ ಆಲಮಟ್ಟಿ ಜಲಾಶಯದಿಂದ ಬಸವಸಾಗರಕ್ಕೆ ಈಗಿರುವ ಒಳಹರಿವಿಗಿಂತಲು ಹೆಚ್ಚಿನ ನೀರು ಬಂದರೆ ಮತ್ತೆ ಕೃಷ್ಣಾ ನದಿಗೆ ನೀರು ಹರಿಸುವ ಪ್ರಮಾಣ ಹೆಚ್ಚಿಸಲಾಗುತ್ತದೆ. ನದಿ ತೀರದ ಗ್ರಾಮಸ್ಥರು ಜಾಗೃತರಾಗಿರಬೇಕು ಎಂದು ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಪ್ರಕಾಶ ಎಂ. ತಿಳಿಸಿದರು.

ಪ್ರಸ್ತುತ ಜಲಾಶಯದಲ್ಲಿ 492.25 ಮೀಟರ್‌ ಗರಿಷ್ಠ ಮಟ್ಟದಲ್ಲಿ 491.48 ಮೀ. ಇದೆ. 33.31 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದಲ್ಲಿ 29.82 ಟಿಎಂಸಿ ಅಡಿ ಇದೆ. ಒಳಹರಿವು 6 ಸಾವಿರ ಕ್ಯೂಸೆಕ್‌ ಇದೆ. ಹೊರಹರಿವು ಆರು ಸಾವಿರ ಕ್ಯೂಸೆಕ್‌ ಇದೆ. ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಟ್ಟಿದ್ದರಿಂದ ಸ್ಥಳೀಯ ಮೀನುಗಾರರು ತಂಡೋಪ ತಂಡವಾಗಿ ನದಿ ತೀರಕ್ಕೆ ಆಗಮಿಸಿ ಮೀನು ಹಿಡಿಯುವ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಗೇಟ್‌ ಬಂದ್‌ ಮಾಡಿರುವುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next