Advertisement

ಅಲೆವೂರು: ಮನೆಗೆ ನುಗ್ಗಿದ ಚಿರತೆ ಸೆರೆ

08:00 AM Aug 09, 2017 | Team Udayavani |

ಉಡುಪಿ: ಉಡುಪಿ ಸಮೀಪದ ಅಲೆವೂರು ಗ್ರಾ.ಪಂ. ಉಪಾಧ್ಯಕ್ಷೆ ಜಯಲಕ್ಷ್ಮೀ ಹಂಸರಾಜ್‌ ಸನಿಲ್‌ ಅವರ ಕೆಮೂ¤ರಿನ ಮನೆಯಲ್ಲಿ ಸೋಮವಾರ ರಾತ್ರಿ ಚಿರತೆ ಪತ್ತೆಯಾಗಿದೆ. ರಾತ್ರಿ ಶ್ವಾನಗಳು ವಿಪರೀತವಾಗಿ ಬೊಗಳುತ್ತಿದ್ದುದನ್ನು ಕಂಡ ಉಪಾಧ್ಯಕ್ಷೆಯ ಪತಿ ಹಂಸರಾಜ್‌ ಅವರು ಮನೆಯ ಸುತ್ತಮುತ್ತ ನೋಡಿ ಮನೆಯ ಹೊರಗಿರುವ ಬಾತ್‌ರೂಮಿನಲ್ಲಿ ಗಮನಿಸಿದಾಗ ಚಿರತೆ ಇರುವುದು ಗೊತ್ತಾಯಿತು. ಕೂಡಲೇ ಅವರು ಬಾತ್‌ರೂಮಿನ ಚಿಲಕವನ್ನು ಹಾಕಿದರು. ರಾತ್ರಿ ವೇಳೆ ಅವರು ಸಾಮಾನ್ಯವಾಗಿ ಹೊರಗಿನ ಬಾತ್‌ರೂಮಿನ ಬಾಗಿಲು ಹಾಕುತ್ತಿರಲಿಲ್ಲ. ಮಂಗಳವಾರ ಮುಂಜಾನೆ
5.30ರ ಸುಮಾರಿಗೆ ಚಿರತೆ ಬಾತ್‌ರೂಮ್‌ನ ಒಳಗಿಂದ ಘರ್ಜಿಸಲು ಆರಂಭಿಸಿದಾಗ ಅರಣ್ಯ ಇಲಾಖೆಗೆ, ಸುತ್ತಮುತ್ತಲಿನ ಜನರಿಗೆ ಮಾಹಿತಿ ನೀಡಿದರು.

Advertisement

ಮುಂಜಾನೆ ವಿಷಯ ತಿಳಿದ ತತ್‌ಕ್ಷಣ ಅರಣ್ಯ ಇಲಾಖೆಯ ಅಧಿಕಾರಿ ಕ್ಲಿಫ‌ರ್ಡ್‌ ಲೋಬೊ, ಸಿಬಂದಿ ತಂಡವು ಸ್ಥಳೀಯರ ಸಹಕಾರದಿಂದ ಚಿರತೆ ಇದ್ದ ರೂಮಿನ ಬಾಗಿಲಿನ ಮುಂಭಾಗಕ್ಕೆ ಬೋನನ್ನು ಅಳವಡಿಸಿ ಕೋಣೆಯ ಬಾಗಿಲು ತೆರೆದಾಗ ಚಿರತೆಯು ಬೋನಿನೊಳಕ್ಕೆ ಬಂದಿದೆ. ಹೀಗೆ ಚಿರತೆಯನ್ನು ಬೋನಿನಲ್ಲಿ ಬಂಧಿಸುವಲ್ಲಿ ಅರಣ್ಯ ಇಲಾಖೆಯವರು ಸಫ‌ಲರಾಗಿದ್ದಾರೆ. 2ರಿಂದ 3 ವರ್ಷ ಪ್ರಾಯದ ಗಂಡುಚಿರತೆ ಅದಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಈ ಪರಿಸರದಲ್ಲಿ ಕೆಲವು ಸಮಯದಿಂದ ಚಿರತೆ ಓಡಾಡುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪರಿಸರದಲ್ಲಿ ಸಾಧಾರಣ ಕಾಡು ಇರುವುದರಿಂದ ಆಗಾಗ್ಗೆ ಚಿರತೆ ಕಂಡಿರುವ ಕುರಿತಂತೆ ಸ್ಥಳೀಯರು ದೂರು ನೀಡುತ್ತಿದ್ದಾರೆ. ಅಲ್ಲಲ್ಲಿ ಬೋನು ಇರಿಸಿದರೂ ಅದು ಸುಲಭವಾಗಿ ಅದಕ್ಕೆ ಬೀಳುವುದಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ತಂತಿಗೆ ಸಿಲುಕಿದ ಇನ್ನೊಂದು ಚಿರತೆ ಮಂದಾರ್ತಿ ಕಾಡೂರಿನ ಗದ್ದೆ ಬದಿಯಲ್ಲಿ ತಂತಿ ಬೇಲಿಗೆ ಸುಮಾರು 2 ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ಸಿಲುಕಿದ್ದು, ಸ್ಥಳೀಯರ ಮಾಹಿತಿಯಂತೆ ಮಂಗಳವಾರ ಬೆಳಗ್ಗೆ ಅಲ್ಲಿಗೆ ತೆರಳಿದ ಅರಣ್ಯ ಇಲಾಖೆಯ ತಂಡ ಚಿರತೆಗೆ ಅರಿವಳಿಕೆ ನೀಡಿ ತಂತಿ ಬೇಲಿಯಿಂದ ಬಿಡಿಸಿ ಬೋನಿಗೆ ಹಾಕುವಲ್ಲಿ ಯಶಸ್ವಿಯಾದರು. ರಕ್ಷಣೆ ಮಾಡಿದ ಎರಡೂ ಚಿರತೆಗಳನ್ನು ರಕ್ಷಿತಾರಣ್ಯಕ್ಕೆ ಬಿಡಲಾಗಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next