Advertisement

ಇಂಡಿಗೋ ವಿಮಾನದ ಜಾಗೃತ ಚಾಲಕನಿಂದ ತಪ್ಪಿತು ಸಂಭಾವ್ಯ ದುರಂತ

07:03 PM Feb 12, 2018 | udayavani editorial |

ರಾಂಚಿ : ರಾಂಚಿಯಿಂದ ದಿಲ್ಲಿಗೆ ಹಾರಲಿದ್ದ 180 ಪ್ರಯಾಣಿಕರನ್ನು ಒಳಗೊಂಡ ಇಂಡಿಗೋ ವಿಮಾನದಲ್ಲಿ  ಕೆಲವು ತಾಂತ್ರಿಕ ದೋಷ ಇರುವುದನ್ನು ಕೊನೇ ಕ್ಷಣದಲ್ಲಿ ಕಂಡುಕೊಂಡ ಜಾಗೃತ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರೀ ಸಂಭಾವ್ಯ ಅವಘಡವೊಂದು ತಪ್ಪಿದಂತಾಗಿದೆ.

Advertisement

ಜಾಗೃತ ಚಾಲಕನು ಇಂಡಿಗೋ ವಿಮಾನ 6ಇ 398ರ ಹಾರಾಟದ ಟೇಕ್‌ ಆಫ್ ಅನ್ನು ತತ್‌ಕ್ಷಣವೇ ಕೈಬಿಟ್ಟಿರುವ ಘಟನೆಯನ್ನು ಪ್ರಭಾತ್‌ ಖಬರ್‌ ವರದಿ ಮಾಡಿದೆ. 

ಇಂಡಿಗೋ ವಿಮಾನದಲ್ಲಿರುವ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಲು ಇಂಜಿನಿಯರ್‌ಗಳಿಗೆ ಸರಿ ಸುಮಾರು ಎರಡೂವರೆ ತಾಸು ಬೇಕಾಯಿತು. 

ಬೆಳಗ್ಗೆ 9.35ಕ್ಕೆ  ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಿಂದ ಹೊರಡಬೇಕಾಗಿದ್ದ ವಿಮಾನ ಮಧ್ಯಾಹ್ನದ ಹೊತ್ತಿಗೆ ತನ್ನ ಯಾನವನ್ನು ಆರಂಭಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next