Advertisement

Aland ಬುದ್ಧನ ಪ್ರತಿಮೆಗೆ ಕೆಸರೆರೆಚಿದ ಕಿಡಿಗೇಡಿಗಳು: ಪರಿಸ್ಥಿತಿ ಉದ್ವಿಗ್ನ

10:49 PM Aug 14, 2024 | Team Udayavani |

ಆಳಂದ: ಪಟ್ಟಣದ ಹಳೆ ಚೆಕ್‌ ಪೋಸ್ಟ್‌ ಬಳಿ ಇರುವ ಬುದ್ಧನ ಪ್ರತಿಮೆಗೆ ಕಿಡಿಗೇಡಿಗಳು ಸಂಜೆ ವೇಳೆ ಕೆಸರೆರೆಚಿದ್ದರಿಂದ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

Advertisement

ದಲಿತ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಬುದ್ಧನ ಅನುಯಾಯಿಗಳು ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯನ್ನು ಖಂಡಿಸಿ ಆ. 15ರಂದು ಪ್ರತಿಭಟನೆ ನಡೆಸುವುದಾಗಿ ಮೂಲಗಳು ತಿಳಿಸಿವೆ.

ಈ ಘಟನೆಗೂ ಕೆಲವು ಗಂಟೆಗಳ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕ ಬಿ. ಆರ್‌. ಪಾಟೀಲ, ಎಂ.ವೈ. ಪಾಟೀಲ ಹಾಗೂ ಇನ್ನಿತರ ಗಣ್ಯರು ಬುದ್ಧನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಮಾಜದ ಎಲ್ಲ ವಲಯಗಳಿಂದ ಈ ಘಟನೆಯ ತೀವ್ರ ಖಂಡನೆ ವ್ಯಕ್ತವಾಗಿದೆ. ಪ್ರಕರಣದ ಹಿನ್ನೆಲೆ ತಿಳಿದುಕೊಳ್ಳಲು ಮತ್ತು ನ್ಯಾಯದ ಪ್ರಕ್ರಿಯೆ ನಡೆಸಲು, ಸ್ಥಳೀಯ ಆಡಳಿತ, ಪೊಲೀಸರೊಂದಿಗೆ ನಿರಂತರ ಸಂವಾದ ನಡೆಸುತ್ತಿದ್ದಾರೆ.

Advertisement

ಈ ಸಂದರ್ಭದಲ್ಲಿ, ಪಟ್ಟಣದ ನಾಗರಿಕರಿಗೆ ಶಾಂತಿ ಕಾಪಾಡುವಂತೆ, ಹಾಗೂ ಯಾವುದೇ ರೀತಿಯ ಪ್ರಚೋದನೆಗೆ ಸಿಲುಕಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next