Advertisement

ಮುಳವಾಡ ಏತನೀರಾವರಿ ಕಾಲುವೆಗಳಿಗೆ ನೀರು ಹರಿಸಿ

03:50 PM Apr 17, 2020 | Naveen |

ಆಲಮಟ್ಟಿ: ಮುಳವಾಡ ಏತನೀರಾವರಿ ಯೋಜನೆ ವ್ಯಾಪ್ತಿಯ ಎಲ್ಲ ಕಾಲುವೆಗಳ ಮೂಲಕ ಏ. 20ರೊಳಗಾಗಿ ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಮನವಿ ಸಲ್ಲಿಸಿದರು.

Advertisement

ಮಧ್ಯಾಹ್ನ ಆಲಮಟ್ಟಿ ಕೃಷ್ಣಾಭಾಗ್ಯಜಲನಿಗಮದ ಮುಖ್ಯ ಅಭಿಯಂತರ ಎಂ.ಎನ್‌.ಪದ್ಮಜಾ ಅವರ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆ ನೀರು ನಿರ್ವಹಣೆ ಸಲಹಾ ಸಮಿತಿ ಅಧ್ಯಕ್ಷ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯು ಬೇಸಿಗೆಯ ಬಿರುಬಿಸಿಲಿಂದ ಜನಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪ್ಪಿಸುವಂತಾಗಿದೆ ಇದರಿಂದ ಜಿಲ್ಲೆಯಲ್ಲಿಯೇ ಬೃಹತ್‌ ಜಲಾಶಯ ನಿರ್ಮಿಸಿದ್ದರೂ ಜನರು ನೀರಿಗಾಗಿ ಪರದಾಡುತ್ತಿದ್ದು, ಅದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಮುಳವಾಡ ಏತನೀರಾವರಿ ಯೋಜನೆಯ ಪೂರ್ವ ಕಾಲುವೆ, ಪಶ್ಚಿಮ ಕಾಲುವೆ ಮಸೂತಿ ಹಾಗೂ ಮಲಘಾಣ ಜಾಕ್‌ ವೆಲ್‌ಗ‌ಳನ್ನು ಆರಂಭಿಸಬೇಕು. ಈಗಾಗಲೇ ವಿಜಯಪುರ ಮುಖ್ಯ ಕಾಲುವೆಯು ಕೂಡಗಿ ಬಳಿ ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿಯೂ ಮುಗಿದಿದೆ. ಇದರಿಂದ ನೀರು ಹರಿಸಲು ಯಾವುದೇ ತೊಂದರೆಯಿಲ್ಲ. ಆದ್ದರಿಂದ ಜಿಲ್ಲೆಯ ಎಲ್ಲ ಕೆರೆಗಳನ್ನು ಕಾಲುವೆಗಳ ಮೂಲಕ ತುಂಬಿಸುಬುದರಿಂದ ಜನ-ಜಾನುವಾರುಗಳು, ವನ್ಯ ಜೀವಿಗಳು ಬದುಕುತ್ತವೆ. ಅಲ್ಲದೇ ಕಾಲುವೆಗಳ ಮೂಲಕ ನೀರು ಹರಿಯುವುದರಿಂದ ಅಂತರ್ಜಲ ಹೆಚ್ಚಾಗಿ ಕೊಳವೆಬಾವಿ ಹಾಗೂ ತೆರೆದಬಾವಿಗಳಿಗೆ ನೀರು ಹೆಚ್ಚಾಗಲಿದೆ ಎಂದು ಹೇಳಿದರು.

ಕರವೀರ ಮಡಿವಾಳರ, ಅಂದಾನಿ ತೋಳಮಟ್ಟಿ, ರೋಣಿಹಾಳ ತಾ.ಪಂ.ಸದಸ್ಯ ಬಸಪ್ಪ ಸಿದ್ದಗೊಂಡ, ಶಿವರಾಜ ಮುರನಾಳ, ಅಪ್ಪುಕಟ್ಟಿಮನಿ, ಮಸೂಬಾಕಟ್ಟಿಮನಿ, ಬಸವರಾಜ ಸಾತಿಹಾಳ, ಅಮರ ಮಡಿವಾಳರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next