Advertisement

‘ಅಕ್ಷಿ’ ಚಿತ್ರಕ್ಕೆ ಮೆಚ್ಚುಗೆ

03:26 PM Dec 10, 2021 | Team Udayavani |

‘ಅಕ್ಷಿ’- ಹೀಗೊಂದು ಸಿನಿಮಾ ಕಳೆದ ವಾರ ತೆರೆಕಂಡಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೇತ್ರದಾನದ ಕಾನ್ಸೆಪ್ಟ್ನೊಂದಿಗೆ ತಯಾರಾದ ಈ ಸಿನಿಮಾದಲ್ಲಿ ಸಾಕಷ್ಟು ಉತ್ತಮ ವಿಚಾರಗಳನ್ನು ಹೇಳಲಾಗಿದೆ. ಈ ಮೂಲಕ ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಂತಾಗಿದೆ.

Advertisement

ಮನೋಜ್‌ ಕುಮಾರ್‌ ಈ ಚಿತ್ರದ ನಿರ್ದೇಶಕರು. “ಈ ಸಿನಿಮಾ ಮಾಡಲು ನಿಜವಾದ ಪ್ರೇರಣೆ ಡಾ.ರಾಜ್‌ಕುಮಾರ್‌. ರಾಜ್‌ಕುಮಾರ್‌ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಆ ವಿಚಾರ ನನಗೆ ಕುತೂಹಲ ಹುಟ್ಟಿಸಿ. ಅದೇ ಅಂಶವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ನಮಗೆ ಒಳ್ಳೆಯ ಸಿನಿಮಾ ಮಾಡಬೇಕೆಂಬ ಉದ್ದೇಶವಷ್ಟೇ ಇತ್ತು’ ಎನ್ನುವುದು ನಿರ್ದೇಶಕರ ಮಾತು.

ಇದನ್ನೂ ಓದಿ:ಬೀರನ ಸಾಹಸಗಳು! 9 ವರ್ಷಗಳ ಬಳಿಕ ತೆರೆಗೆ ಬರುವ ಪ್ರಯತ್ನ

ಚಿತ್ರದಲ್ಲಿ ಗೋವಿಂದೇಗೌಡ, ಬೇಬಿ ಸೌಮ್ಯ ಪ್ರಭು, ಮಾಸ್ಟರ್‌ ಮಿಥುನ್‌, ಇಳಾ ವಿಟ್ಲ ನಟಿಸಿದ್ದಾರೆ. ಚಿತ್ರವನ್ನು ಶ್ರೀನಿವಾಸ್‌ ವಿ, ರಮೇಶ್‌ ಹಾಗೂ ರವಿ ಹೆಚ್‌. ಎಸ್‌ ಸೇರಿ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next