Advertisement

ಅಕ್ಷಿ ತಂಡದ ಮೊಗದಲ್ಲಿ ನಗು

04:23 PM Mar 28, 2021 | Team Udayavani |

ಹೊಸಬರೇ ಸೇರಿ ಮಾಡಿರುವ “ಅಕ್ಷಿ’ ಚಿತ್ರ ತಂಡ ಖುಷಿಯಾಗಿದೆ. ಅದಕ್ಕೆ ಕಾರಣ ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಪ್ರಾದೇಶಿಕ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ “ಅಕ್ಷಿ’ ಆ ಖುಷಿಯನ್ನು ಹಂಚಿಕೊಳ್ಳಲು ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿತ್ತು.

Advertisement

ಚಿತ್ರದ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌ ಮಾತನಾಡಿ, “ಈ ಸಿನಿಮಾ ಮಾಡಲು ನಿಜವಾದ ಪ್ರೇರಣೆ ಡಾ.ರಾಜ್‌ ಕುಮಾರ್‌. ರಾಜ್‌ಕುಮಾರ್‌ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಆ ವಿಚಾರ ನನಗೆ ಕುತೂಹಲ ಹುಟ್ಟಿಸಿ, ಅದೇ ಅಂಶವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ನಮಗೆ ಒಳ್ಳೆಯ ಸಿನಿಮಾ ಮಾಡಬೇಕೆಂಬ ಉದ್ದೇಶವಷ್ಟೇ ಇತ್ತು. ಈಗ ನಮ್ಮ ಪ್ರಯತ್ನವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ’ ಎಂದರು.

ಮನೋಜ್‌ ಕುಮಾರ್‌ ಈ ಚಿತ್ರದ ನಿರ್ದೇಶಕರು. “ಒಂದೊ ಳ್ಳೆಯ ಸಿನಿಮಾ ಮಾಡಬೇಕೆಂಬ ಉದ್ದೇ ಶ ದಿಂದ ಈ ಸಿನಿಮಾವನ್ನು ಆರಂಭಿಸಿದೆವು. ಈಗ ನಮ್ಮ ಶ್ರಮ ವನ್ನು ಗುರುತಿಸಿದ್ದಾ ರೆ’ ಎಂದು ಸಂತಸ ಹಂಚಿ ಕೊಂಡ ರು. ಚಿತ್ರ ದಲ್ಲಿ ಗೋವಿಂದೇ ಗೌಡ, ಇಳಾ ವಿಟ್ಲ, ಬಾಲ ಕಲಾವಿದರಾದ ಮಿಥುನ್‌, ನಾಗರಾಜ್, ಕಸ್ತೂರಿ ಸೇರಿ ದಂತೆ ಅನೇ ಕರು ನಟಿಸಿದ್ದಾ ರೆ.

Advertisement

Udayavani is now on Telegram. Click here to join our channel and stay updated with the latest news.

Next