Advertisement

ಅಕ್ಷರಧಾಮ ದಾಳಿಯ ರೂವಾರಿ ಯಾಸಿನ್ ಭಟ್ ಸೆರೆ

09:58 AM Jul 27, 2019 | Team Udayavani |

ಅಹಮದಾಬಾದ್ : ಗುಜರಾತ್ ನ ಗಾಂಧಿನಗರದಲ್ಲಿರುವ ಅಕ್ಷರಧಾಮ ದೇವಸ್ಥಾನದ ಮೇಲಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಯಾಸಿನ್ ಭಟ್ ಬಂಧನವಾಗಿದೆ.

Advertisement

ಉಗ್ರ ಯಾಸಿನ್ ನನ್ನು ಗುಜರಾತ್ ಉಗ್ರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಆತನನ್ನು ಅಹಮದಾಬಾದ್ ಗೆ ಕರೆತರಲಾಗುತ್ತಿದೆ.

ಅಕ್ಷರಧಾಮ ದಾಳಿಯ ರೂವಾರಿ ಯಾಸಿನ್ ಭಟ್ ಬಂಧನಕ್ಕೆ ಗುಜರಾತ್ ಎಟಿಎಸ್ ಕಳೆದ ಮೂರು ವರ್ಷಗಳಿಂದ ಬಲೆಬೀಸಿತ್ತು. ಮೂವರು ಎಸಿಪಿಗಳು ಮತ್ತು ಇಬ್ಬರು ಪೊಲೀಸ್ ಇನ್ ಸ್ಪೆಕ್ಟರ್ ಗಳ ತಂಡ ವಿಶೇಷ ವಿಮಾನದಲ್ಲಿ ಯಾಸಿನ್ ನನ್ನು ಅಹಮದಾಬಾದ್ ಗೆ ಕರೆತರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next