Advertisement

Uppinangady ಚರಂಡಿಗೆ ಎಸೆಯುತ್ತಿದ್ದಾರೆ ಅಕ್ಷರ ದಾಸೋಹದ ಅನ್ನ !

12:30 AM Jul 03, 2024 | Team Udayavani |

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಶಾಲೆಯ ಮಧ್ಯಾಹ್ನದ ಅಕ್ಷರ ದಾಸೋಹದ ಬಿಸಿಯೂಟ ಚರಂಡಿ ಪಾಲಾಗುತ್ತಿರುವ ಬಗ್ಗೆ ಗಂಭೀರ ಆರೋಪ ವ್ಯಕ್ತವಾಗಿದ್ದು, ಚರಂಡಿಯ ತುಂಬಾ ಅನ್ನ ರಾಶಿ ಬಿದ್ದಿರುವುದು ಕಂಡು ಬಂದಿದೆ.

Advertisement

ಬೆಳಗ್ಗೆ ಶಾಲೆಯಲ್ಲಿ ಹಾಜರಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅನ್ನ ಸಿದ್ಧಪಡಿಸುವುದು ಶಾಲಾ ನಿಯಮ. ಆದರೆ ಇಲ್ಲಿ ಬೇಯಿಸಿದ ಅನ್ನವನ್ನು ಮಕ್ಕಳು ಸೇವಿಸುವುದಿಲ್ಲವೋ, ಲೆಕ್ಕಕ್ಕಿಂತ ಅಧಿಕ ಅಕ್ಕಿಯನ್ನು ಬೇಯಿಸುತ್ತಿದ್ದಾರೋ ಎನ್ನುವುದು ತಿಳಿಯದು ಎನ್ನುವ ಪೋಷರು ಬಹುಪಾಲು ಅನ್ನ ಚರಂಡಿ ಸೇರುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಪೋಷಕರೋರ್ವರು ದೂರಿಕೊಂಡಿದ್ದಾರೆ.

ಸ್ಥಳಕ್ಕೆ ಭೇಟಿ: ಪರಿಶೀಲನೆ
ಸಾರ್ವಜನಿಕರಿಂದ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪಂ. ಪಿಡಿಒ ವಿಲ್ಫೆಡ್‌ ಲಾರೆನ್ಸ್‌ ರೋಡ್ರಿಗಸ್‌, ಚರಂಡಿಯಲ್ಲಿ ಮಕ್ಕಳಿಗೆ ನೀಡಬೇಕಾದ ಅನ್ನ ಎಸೆಯಲ್ಪಟ್ಟಿರುವುದನ್ನು ಆಕ್ಷೇಪಿಸಿ, ತತ್‌ಕ್ಷಣವೇ ಚರಂಡಿಯಲ್ಲಿದ್ದ ಅನ್ನವನ್ನು ತೆರವುಗೊಳಿಸಿ ಸುಸ್ಥಿತಿಯಲ್ಲಿರಿಸಬೇಕೆಂದು ಶಾಲಾ ಮುಖ್ಯೋ ಪಾಧ್ಯಾಯರಿಗೆ ನಿರ್ದೇಶನ ನೀಡಿದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next