Advertisement

ನೆರೂಲ್‌ನಲ್ಲಿ ಅಖಂಡ ಹರಿನಾಮ ಸಂಕೀರ್ತನೆ ಕಾರ್ಯಕ್ರಮ 

05:04 PM Dec 20, 2018 | Team Udayavani |

ನವಿ ಮುಂಬಯಿ: ನೆರೂಲ್‌ ಸೆಕ್ಟರ್‌-29ರಲ್ಲಿರುವ  ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದಲ್ಲಿ  ಡಿ. 15 ರಂದು  ಬೆಳಗ್ಗೆ 7.30 ರಿಂದ ಡಿ. 16 ಬೆಳಗ್ಗೆ 7.30 ವರೆಗೆ  ಸಂಪೂರ್ಣ ಒಂದು ದಿನದ ಅಹೋರಾತ್ರಿ ಅಖಂಡ ಹರಿನಾಮ ಸಂಕೀರ್ತನೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಬಂಟರ ಸಂಘ ಮುಂಬಯಿ  ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪಾಧ್ಯಕ್ಷರಾದ ಸುಬ್ಬಯ್ಯ ಶೆಟ್ಟಿ ಕಲ್ಯಾಣ್‌, ಕಮಲಾಮಣಿ ಇನಾ#Å ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕ ಹಾಗು ರಾಷ್ಟ್ರೀಯ ಬಜರಂಗ ದಳ, ನವಿ ಮುಂಬಯಿ  ಇದರ ಉಪಾಧ್ಯಕ್ಷ ವಿನೋದ್‌ ಉಚ್ಚಿಲ…, ಬಂಟರ ಸಂಘ ಮುಂಬಯಿ  ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷ  ಜಗದೀಶ್‌ ಶೆಟ್ಟಿ, ನಂದಿಕೂರು ಅವರು  ಕ್ಷೇತ್ರದ ಅಧ್ಯಕ್ಷರಾದ ಸಂಜೀವ ಎನ್‌. ಶೆಟ್ಟಿ ಮತ್ತು ಮಂದಿರದ ಪ್ರಧಾನ ಅರ್ಚಕರ ಉಪಸ್ಥಿತಿಯಲ್ಲಿ ಅಖಂಡ ಭಜನಾ ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿದರು.

ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿ ನೆರೂಲ…, ದುರ್ಗಾಪರಮೇಶ್ವರಿ ಭಜನಾ ಮಂಡಳಿ ನವಿ ಮುಂಬಯಿ, ಶ್ರೀ ಖಾಂದೇಶ್ವರ ಭಜನಾ ಮಂಡಳಿ ಖಾಂದ ಕಾಲನಿ, ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಸಿಬಿಡಿ ಬೇಲಾಪುರ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಭಜನಾ ಮಂಡಳಿ ಡೊಂಬಿವಲಿ, ಗೋಕುಲ್‌ ಭಜನಾ ಮಂಡಳಿ ಸಯನ್‌, ಸದ್ಗುರು ಶ್ರೀಕೃಷ್ಣ ಭಜನಾ ಮಂಡಳಿ ವಿಲೇಪಾರ್ಲೆ, ವಜ್ರಮಾತಾ ಮಹಿಳಾ ಭಜನಾ ಮಂಡಳಿ ಮಹಾರಾಷ್ಟ್ರ ಘಟಕ ಮುಂಬಯಿ, ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಭಾಂಡೂಪ್‌, ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಸಾಕಿನಾಕಾ, ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ, ಜೆರಿಮೇರಿ,  ಶ್ರೀ  ಶನೀಶ್ವರ ಭಜನಾ ಮಂಡಳಿ ನೆರೂಲ…, ಶ್ರೀ ಮಹಾಕಾಳೇಶ್ವರ ಭಜನಾ ಮಂಡಳಿ ಶಿರೋನೆಗಾಂವ್‌, ಶ್ರೀ ರಾಮ ಭಜನಾ ಮಂಡಳಿ ಮುಂಬಯಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೆಪಾಡಾ,  ಸಹಸ್ರ ಕಲಾ ವೃಂದ ಸೀವುಡ್‌ ಭಜನಾ ಮಂಡಳಿಗಳು ಅಖಂಡ ಭಜನೋತ್ಸವದಲ್ಲಿ ಪಾಲ್ಗೊಂಡಿದ್ದವು.

ಆನಂತರ ಕುಣಿತ ಭಜನೆ ಮತ್ತು ಭಜನಾ ಮಂಗಳಾರತಿ ನಡೆಯಿತು. ಡಿ. 16 ರಂದು ಮುಂಜಾನೆ 7.30ಕ್ಕೆ ಅಖಂಡ ಭಜನೆಯು ಸಮಾಪ್ತಿಗೊಂಡಿತು. ಆನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಮಂದಿರದ ಪದಾಧಿಕಾರಿಗಳು, ವಿಶ್ವಸ್ಥರು, ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ, ಸರ್ವ ಸದಸ್ಯರು ಹಾಗು ಅರ್ಚಕ ವೃಂದದವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next