Advertisement

ಪುಲಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಶಾಸಕ ಸ್ಥಾನಕ್ಕೆ ರಾಜೀನಾಮೆ

09:59 PM Apr 16, 2023 | Team Udayavani |

ಶಿರಸಿ: ಅತಿ ಹೆಚ್ಚು ಮತ ಪಡೆದವನಿಗೇ ಟಿಕೆಟ್ ಇಲ್ಲವೇ ? ಮೂರು ಪಟ್ಟಿಯಲ್ಲಿಯೂ ಹೆಸರು ಇರದೇ ಇರುವುದು ಬೇಸರ ತಂದಿದೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಪುಲಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕೇಳಿದರು.

Advertisement

ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಭಾನುವಾರ ರಾತ್ರಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಮೂರು ಪಟ್ಟಿಯಲ್ಲೂ ಹೆಸರಿಲ್ಲ. ಅದೇ ಬೇಸರ. ನನ್ನ ಬೆಂಬಲಿಗರೂ, ಮತದಾರರೂ ದಿನಾ ಕೇಳುತ್ತಾರೆ. ನಾನು ಕ್ಷೇತ್ರದ ಜನತೆಗೆ ಏನೆಂದು ಉತ್ತರ ಕೊಡಲಿ? ನಮ್ಮ ಕ್ಷೇತ್ರದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಒಗ್ಗಟ್ಟಾಗಿದ್ದೇವೆ ಎಂದರು.

ನಾನೇನು ತಪ್ಪು ಮಾಡಿಲ್ಲ. ಈ ಘಟನೆಯಿಂದ ನೋವಾಗಿದೆ ಎಂದೂ ಹೇಳಿದ ಅವರು, ಕಾರ್ಯಕರ್ತರ ಜೊತೆ ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಈ ವೇಳೆ ಶ್ರೀನಿವಾಸ ಪಟೇಲ, ಡಿಪೋ ಬಾಬು, ಗೋಪಾಲ ಇತರರರು ಇದ್ದರು.

ಇದನ್ನೂ ಓದಿ: ಅಪ್ರಾಪ್ತೆಯನ್ನು ಪುಸಲಾಯಿಸಿ ಬಲಾತ್ಕಾರ: ವಿಚಾರಣೆ ವೇಳೆ ಬೆಳಕಿಗೆ ಬಂತು ಬಾಲ್ಯ ವಿವಾಹ ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next