Advertisement

Aranthodu ಅಜ್ಜಾವರ: ಅಪಹರಣಕ್ಕೆ ಯತ್ನ; ದೂರು ದಾಖಲು

11:26 PM Jul 08, 2024 | Team Udayavani |

ಅರಂತೋಡು: ಸುಳ್ಯ ಕಾಟಿಪಳ್ಳದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನನ್ನು ಕಾರಿನಲ್ಲಿ ಬಂದವರು ಅಪಹರಿಸಲು ಯತ್ನಿಸಿರುವ ಕುರಿತು ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಅಜ್ಜಾವರದ ಕಾಟಿಪಳ್ಳದ ಕುಶಲ ಅವರ ಪುತ್ರ ದಿನ್‌ರಾಜ್‌ (17) ಅವರು ಜು.6ರಂದು ಮಧ್ಯಾಹ್ನ ಮನೆಯಿಂದ ಮೇನಾಲದ ಕಡೆಗೆ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ 800 ಬಿಳಿ ಬಣ್ಣದ ಕಾರಿನಲ್ಲಿ ಬಂದವರು ಅಪಹರಿಸಲು ಯತ್ನಿಸಿದ್ದಾರೆ.

ದಿನ್‌ರಾಜ್‌ ಕಾರಿನಲ್ಲಿದ್ದವರಲ್ಲಿ ಒಬ್ಬನಿಗೆ ಎರಡೇಟು ನೀಡಿ,ಬಾಗಿಲು ತೆಗೆದು ತಪ್ಪಿಸಿಕೊಂಜು ಮೇನಾಲಕ್ಕೆ ಹೋಗಿ ವಿಷಯ ತಿಳಿಸಿದರೆನ್ನಲಾಗಿದೆ. ಈ ಸಂಬಂಧ ಯುವಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಸಿ.ಸಿ ಕೆಮರಾವನ್ನು ಪರಿಶೀಲಿಸಿದ್ದಾಗ ಯಾವುದೇ ಮಾಹಿತಿ ದೊರೆಯಲಿಲ್ಲ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next