Advertisement

ಅಜೆಕಾರು: ಕುಸಿದು ವರ್ಷ ಕಳೆದರೂ ದುರಸ್ತಿಯಾಗದ ಮಾಂಜಾ ಸೇತುವೆ

10:23 AM Jul 05, 2019 | Team Udayavani |

ಅಜೆಕಾರು: ಮಳೆಗೆ ಕುಸಿದ ಮಾಂಜಾ ಸೇತುವೆ ವರ್ಷ ಕಳೆದರೂ ದುರಸ್ತಿಯಾಗದೆ ಸಂಪೂರ್ಣ ಕೊಚ್ಚಿಹೋಗುವ ಹಂತದಲ್ಲಿದೆ. ಮರ್ಣೆ ಗ್ರಾಮ ಪಂಚಾಯತ್‌ ಹಾಗೂ ಕಡ್ತಲ ಗ್ರಾಮ ಪಂಚಾಯತ್‌ ನಡುವೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ತಡೆಗೋಡೆ ಹಾಗೂ ಆಧಾರ ಸ್ತಂಭ 2018ರ ಜೂನ್‌ 15ರಂದು ಭಾರೀ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು.

Advertisement

ಅಜೆಕಾರು ಕೈಕಂಬದಿಂದ ಕುಕ್ಕುಜೆಯ ಮೂಡ ಬೆಟ್ಟು ದೊಂಡೇರಂಗಡಿ ಸಂಪರ್ಕಿಸಲು ಅತೀ ಹತ್ತಿರದ ಮಾರ್ಗ ಇದಾಗಿದ್ದು ಸೇತುವೆ ಕುಸಿತದಿಂದ ನಾಗರಿಕರು ಸಂಚಾರ ಕಡಿತದ ಭೀತಿಯಲ್ಲಿದ್ದಾರೆ.

ಈ ಸೇತುವೆಯು ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಸೇತುವೆ ಅಭಿವೃದ್ಧಿಪಡಿಸಲು ಹಾಗೂ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದೆ. ಅರಣ್ಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುವುದರಿಂದ ಸಮಸ್ಯೆ ಉಂಟಾಗಿದೆ. ದಶಕಗಳ ಹಿಂದಷ್ಟೇ ನಿರ್ಮಾಣವಾದ ಈ ಸೇತುವೆಯ ನಡುವಿನ ಆಧಾರಸ್ತಂಭವು ಬಿರುಕುಬಿಟ್ಟಿದ್ದು ಅನಂತರದ ದಿನಗಳಲ್ಲಿ ತೇಪೆ ಕಾರ್ಯ ನಡೆಸಲಾಗಿತ್ತು ಎಂದು ಸ್ಥಳೀಯರು ದೂರಿದ್ದಾರೆ.

ಹೊಸ ಸೇತುವೆಗೆ ಚಿಂತನೆ

ಮಾಂಜಾ ಸೇತುವೆ ದುರಸ್ತಿ ಮಾಡುವ ಬದಲಾಗಿ ಸ್ಥಳೀಯರ ಬೇಡಿಕೆಯಂತೆ ಪಡುಬೈಂತ್ಲ ಪ್ರದೇಶದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
– ಜ್ಯೋತಿ ಹರೀಶ್‌, ಜಿ.ಪಂ. ಸದಸ್ಯರು

ಸಹಕಾರ ಅಗತ್ಯ

ಸೇತುವೆ ದುರಸ್ತಿಪಡಿಸಲು ಅನುದಾನ ಒದಗಿಸುವಂತೆ ಜಿ.ಪಂ. ಹಾಗೂ ಶಾಸಕರಿಗೆ ಮನವಿ ಮಾಡಲಾಗಿದೆ. ಸೇತುವೆ ದುರಸ್ತಿಗೆ ಅರಣ್ಯ ಇಲಾಖೆಯ ಸಹಕಾರವೂ ಅಗತ್ಯ.
– ದಿನೇಶ್‌ ಕುಮಾರ್‌, ಅಧ್ಯಕ್ಷರು ಮರ್ಣೆ ಗ್ರಾ.ಪಂ.
Advertisement
Advertisement

Udayavani is now on Telegram. Click here to join our channel and stay updated with the latest news.

Next