Advertisement

ಶಶಾಂಕ್ ‌ಕಥೆಯಲ್ಲಿ ಅಜೇಯ್‌ ನಟನೆ

01:27 PM Dec 23, 2020 | Suhan S |

ನಿರ್ದೇಶಕ ಶಶಾಂಕ್‌ ಹಾಗೂ ನಟ ಅಜೇಯ್‌ ರಾವ್‌ ಕಾಂಬಿನೇಶನ್‌ಗೆ ಒಂದು ವಿಶೇಷತೆ ಇದೆ. ಅದೇನೆಂದರೆ ಈ ಜೋಡಿ ಮಾಡಿರುವ ಸಿನಿಮಾಗಳು ಯಶಸ್ಸುಕಂಡಿವೆ.

Advertisement

ಅದರಲ್ಲೂ “ಕೃಷ್ಣ’ ಸೀರಿಸ್‌ನಲ್ಲಿ ಅಜೇಯ್‌ ಹಾಗೂ ಶಶಾಂಕ್‌ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈಗ ಮತ್ತೂಮ್ಮೆ ಈ ಜೋಡಿ ಒಂದಾಗುತ್ತಿದೆ. ಹಾಗಂತ ಶಶಾಂಕ್‌, ಅಜೇಯ್‌ಗೆ ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ ಶಶಾಂಕ್‌ ಅವರ ಕಥೆಯಲ್ಲಿ ಅಜೇಯ್‌ ರಾವ್‌ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಶಂಕರ್‌ ನಿರ್ದೇಶಿಸುತ್ತಿದ್ದಾರೆ.

ನಿರ್ದೇಶಕ ಗುರುದೇಶಪಾಂಡೆ ಅವರ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವವಿರುವ ಶಂಕರ್‌ಗೆ ಇದು ಚೊಚ್ಚಲ ಸಿನಿಮಾ. ಈಗ ಅಜೇಯ್‌ ರಾವ್‌ ಅವರ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರವನ್ನು ಗುರುದೇಶಪಾಂಡೆ ತಮ್ಮ ಜಿ ಸಿನಿಮಾಸ್‌ ನಡಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ : ಲಂಡನ್‌ ರಿಟರ್ನ್ ಹರ್ಷಿಕಾ ಮತ್ತು ಕ್ವಾರಂಟೈನ್‌ ಶಾಕ್‌!

ಈಗಾಗಲೇ ತಮ್ಮ ಬ್ಯಾನರ್‌ನಲ್ಲಿ “ಜಂಟಲ್‌ಮೆನ್‌’ ಸಿನಿಮಾ ನಿರ್ಮಿಸಿರುವ ಗುರುದೇಶಪಾಂಡೆ ಈಗ ಅಜೇಯ್‌ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಜನವರಿ 24 ರಂದು ಚಿತ್ರದ ಮುಹೂರ್ತ ನೆರವೇರಲಿದೆ. ಚಿತ್ರಕ್ಕೆ ಸ್ಟಾರ್‌ ನಟಿಯೊಬ್ಬರು ನಾಯಕಿಯಾಗುವ ಸಾಧ್ಯತೆ ಇದೆ. ಈ ಕುರಿತುಈಗಾಗಲೇ ಮಾತುಕತೆನಡೆಯುತ್ತಿದೆ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಗುರುದೇಶಪಾಂಡೆ, “ಈಚಿತ್ರದಕಥೆ ತುಂಬಾವಿಶೇಷವಾಗಿದೆ. ಇವತ್ತಿನ ಸಮಯಕ್ಕೆ ಹೇಳಿಮಾಡಿಸಿದಂತಿದೆ. ಅದೇ ಕಾರಣಕ್ಕೆ ಈ ಚಿತ್ರವನ್ನು ಮೊದಲು ಆರಂಭಿಸುತ್ತಿದ್ದೇನೆ. ಇದು ಮುಗಿದ ಮೇಲೆ ನನ್ನ ನಿರ್ದೇಶನದ ಚಿತ್ರ ಆರಂಭವಾಗಲಿದೆ. ಅಜೇಯ್‌ ಹಾಗೂ ಶಶಾಂಕ್‌ ಯಶಸ್ವಿ ಜೋಡಿ. ಈಗ ಶಶಾಂಕ್‌ ಅವರಕಥೆಯಲ್ಲಿ ಅಜೇಯ್‌ ನಟಿಸುತ್ತಿದ್ದಾರೆ. ಜೊತೆಗೆ ಚಿತ್ರರಂಗಕ್ಕೆಹೊಸ ನಿರ್ದೇಶಕರೊಬ್ಬರ ಪರಿಚಯ ಕೂಡಾ ಆಗುತ್ತಿದೆ’ ಎನ್ನುವುದು ಗುರುದೇಶಪಾಂಡೆ ಮಾತು.

Advertisement

Udayavani is now on Telegram. Click here to join our channel and stay updated with the latest news.

Next