Advertisement

ಮಾರ್ಚ್‌ 8 ವರೆಗೆ ಚಿದಂಬರಂ, ಪುತ್ರ ಕಾರ್ತಿ ಬಂಧನ ಇಲ್ಲ: ಕೋರ್ಟ್‌

06:27 AM Feb 18, 2019 | Team Udayavani |

ಹೊಸದಿಲ್ಲಿ : ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ  ಏರ್‌ಸೆಲ್‌ ಮ್ಯಾಕ್ಸಿಸ್‌ ಹಗರಣ ಕೇಸಿಗೆ ಸಂಬಂಧಿಸಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಗೆ ಬಂಧನದಿಂದ ನೀಡಲಾಗಿದ್ದ ರಕ್ಷಣೆಯ ಅವಧಿಯನ್ನು ದಿಲ್ಲಿ ಕೋರ್ಟ್‌ ಮಾರ್ಚ್‌ 8ರ ವರೆಗೆ ವಿಸ್ತರಿಸಿದೆ.

Advertisement

ಹಗರಣಕ್ಕೆ ಸಂಬಂಧಿಸಿ ಮಾರ್ಚ್‌ 5, 6, 7 ಮತ್ತು 12ರಂದು ತನ್ನ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ, ಚಿದಂಬರಂ ಮತ್ತು ಕಾರ್ತಿ ಅವರನ್ನು ಕೇಳಿಕೊಂಡಿದ್ದಾರೆ ಎಂದು ವಿಶೇಷ ನ್ಯಾಯಾಧೀಶ ಓ ಪಿ ಸಾಯಿನಿ ಅವರಿಗೆ ಇಡಿ ವಕೀಲರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next