Advertisement

ಕಾಶ್ಮೀರ: ವಾಯುಪಡೆ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್‌!

09:09 AM Aug 04, 2019 | Team Udayavani |

ಶ್ರೀನಗರ: ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರೆಸೇನಾಪಡೆಗಳನ್ನು ಕೇಂದ್ರ ಸರಕಾರ ನಿಯೋಜಿಸುತ್ತಿರುವಂತೆಯೇ, ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುತ್ತಿದೆ. ಈಗಾಗಲೇ ಆಯಕಟ್ಟಿನ ಜಾಗದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

Advertisement

ಕೇಂದ್ರ ಪಡೆಗಳೇ ಇಡೀ ಕಾನೂನು ಸುವ್ಯವಸ್ಥೆ ಮೇಲೆ ಕಣ್ಣಿಟ್ಟಿದೆ. ಸ್ಥಳೀಯ ಪೊಲೀಸರಿಗಿಂತಲೂ ಹೆಚ್ಚು ಪರಿಸ್ಥಿತಿ ಮೇಲೆ ಕೇಂದ್ರದ ಪಡೆಗಳು ಹದ್ದಿನ ಕಣ್ಣಿಟ್ಟಿವೆ. ಇದರೊಂದಿಗೆ ಸದ್ಯ ವಾಯುಪಡೆ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಮತ್ತೊಂದೆಡೆ  ಸರಕಾರಿ ವೈದ್ಯರ ರಜೆಗಳನ್ನು ರದ್ದುಪಡಿಸಲಾಗಿದೆ. ರಜೆ ಹಾಕಬೇಕಾದರೂ ಮೇಲಧಿಕಾರಿಗಳ ಅನುಮತಿ ರಹಿತವಾಗಿ ರಜೆ ಹಾಕುವಂತಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಆಡಳಿತ ಫ‌ರ್ಮಾನು ಹೊರಡಿಸಿದೆ. ಇದರಿಂದ ಕಾಶ್ಮೀರದಲ್ಲೇನೋ ನಡೆಯುತ್ತಿದೆ ಎಂಬ ಮಾತುಗಳು ಇನ್ನಷ್ಟು ಬಿಸಿ ಬಿಸಿ ಚರ್ಚೆಯಾಗಲು ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next