Advertisement

AINRC ವರಿಷ್ಠ ರಂಗಸ್ವಾಮಿ ಇಂದು ಪುದುಚೇರಿ ಸಿಎಂ ಆಗಿ ಪ್ರಮಾಣವಚನ ಸಾಧ್ಯತೆ

11:40 AM May 07, 2021 | Team Udayavani |

ಪುದುಚೇರಿ: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ ಎಐಎನ್ ಆರ್ ಸಿ ವರಿಷ್ಠ ಎನ್.ರಂಗಸ್ವಾಮಿ ಶುಕ್ರವಾರ(ಮೇ 07) ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಮೂರು ಸಿನಿಮಾ ಸುತ್ತ ಸುದೀಪ್‌ ಹೆಸರು; ಪರಭಾಷೆಯಲ್ಲೂ ಕಿಚ್ಚನಿಗೆ ಡಿಮ್ಯಾಂಡ್‌

ಇಲ್ಲಿನ ರಾಜ್ ನಿವಾಸದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ರಂಗಸ್ವಾಮಿ ಅವರಿಗೆ ಲೆಫ್ಟಿನೆಂಟ್ ಗವರ್ನರ್ ತಮಿಳ್ ಸಾಯಿ ಸೌಂದರ್ ರಾಜನ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ರಂಗಸ್ವಾಮಿ ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದೆ. ಎನ್ ಡಿಎ ಮೈತ್ರಿಯೊಂದಿಗೆ ಚುನಾವಣೆಯಲ್ಲಿ ಎಐಎನ್ ಆರ್ ಸಿ ಪಕ್ಷ ಸ್ಪರ್ಧಿಸಿತ್ತು.

ಪುದುಚೇರಿಗೆ ಮುಖ್ಯಮಂತ್ರಿ ಸೇರಿದಂತೆ ಆರು ಮಂದಿ ಮಾತ್ರ ಸಚಿವ ಸಂಪುಟದಲ್ಲಿ ಇರುತ್ತಾರೆ. ಆದರೆ ಈ ಬಾರಿ ಡೆಪ್ಯುಟಿ ಮುಖ್ಯಮಂತ್ರಿ ಸ್ಥಾನವೊಂದು ನೀಡುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next