Advertisement

ಶಶಿಕಲಾ ಜತೆ ರಾಜಕೀಯದ ಒಳಸಂಚು: ಪಕ್ಷದ 16 ಸದಸ್ಯರನ್ನು ಉಚ್ಛಾಟಿಸಿದ ಎಐಎಡಿಎಂಕೆ

05:19 PM Jun 14, 2021 | Team Udayavani |

ಚೆನ್ನೈ: ಪಕ್ಷದಿಂದ ಉಚ್ಛಾಟಿಸಲ್ಪಟ್ಟಿದ್ದ ವಿ.ಕೆ.ಶಶಿಕಲಾ ಜತೆ ಸೇರಿ ರಾಜಕೀಯಕ್ಕೆ ಮರಳುವ ಬಗ್ಗೆ ಒಳಸಂಚು ನಡೆಸಿದ್ದ ಆರೋಪದಡಿ ಪಕ್ಷದ ವಕ್ತಾರ ಪುಗಳೇಂದಿ ಸೇರಿದಂತೆ 16 ಮಂದಿ ಸದಸ್ಯರನ್ನು ಪಕ್ಷದಿಂದ ಉಚ್ಛಾಟಿಸಿರುವುದಾಗಿ ಎಐಎಡಿಎಂಕೆ ಸೋಮವಾರ(ಜೂನ್ 14) ತಿಳಿಸಿದೆ.

Advertisement

ಇದನ್ನೂ ಓದಿ:ಕೋವಿಡ್ 19: ಜುಲೈ1ರವರೆಗೆ ಲಾಕ್ ಡೌನ್ ವಿಸ್ತರಣೆ: ಮಮತಾ ಬ್ಯಾನರ್ಜಿ ಘೋಷಣೆ

ವಿ.ಕೆ.ಶಶಿಕಲಾ ಜತೆ ರಹಸ್ಯವಾಗಿ ಮಾತುಕತೆ ನಡೆಸಿರುವುದು ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಈ ನಿಟ್ಟಿನಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ವಿವರಿಸಿದೆ. ಪಕ್ಷದ ಕಾರ್ಯಕರ್ತರ ಜತೆ ಶಶಿಕಲಾ ಅವರ ದೂರವಾಣಿ ಸಂಭಾಷಣೆಯನ್ನು ನಾಟಕ ಎಂದು ಕರೆದಿರುವ ಎಐಎಡಿಎಂಕೆ, ಕೇವಲ ಒಂದು ಕುಟುಂಬದ ಆಸೆಗಾಗಿ ಈ ಪಕ್ಷ ಎಂದಿಗೂ ನಾಶವಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಶಶಿಕಲಾ ಮತ್ತು ಪಕ್ಷದ ಸದಸ್ಯರೊಬ್ಬರ ನಡುವಿನ ಫೋನ್ ಸಂಭಾಷಣೆಯ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಬೆಳವಣಿಗೆ ನಡೆದಿದೆ. ಇದರಲ್ಲಿ ಶಶಿಕಲಾ ರಾಜಕೀಯ ಮರಳುವುದನ್ನು ಖಚಿತಪಡಿಸಿಕೊಳ್ಳುವುದು ದಾಖಲಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next